CrimeDistricts

ಪತ್ನಿ ಜೊತೆ ಜಗಳ; ಯೋಧನಿಗೆ ಚಾಕು ಇರಿದು ಕೊಂಡ ಬಾಮೈದ

ಬಾಗಲಕೋಟೆ; ರಜೆ ಮೇಲೆ ಊರಿಗೆ ಬಂದಿದ್ದ ಯೋದನೊಬ್ಬ ತನ್ನ ಪತ್ನಿಯ ಜೊತೆ ಜಗಳ ತೆಗೆದಿದ್ದಾನೆ. ಇದರಿಂದ ರೊಚ್ಚಿಗೆದ್ದ ಪತ್ನಿಯ ತಮ್ಮ ಚಾಕುವಿನಿಂದ ಇರಿದು ಯೋಧನನ್ನು ಕೊಲೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ

 ಕರಿಸಿದ್ದಪ್ಪ‌ ಕಳಸದ (25) ಕೊಲೆಯಾದ ಯೋಧ. ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ನಾಲ್ಕು ದಿನದ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿ  ವಿದ್ಯಾ ಜೊತೆ ಕಳೆದ ರಾತ್ರಿ ಜಗಳ ತೆಗೆದಿದ್ದ. ಇದರಿಂದಾಗಿ ವಿದ್ಯಾ ತನ್ನ ಸಹೋದರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು. ಕೋಪದಲ್ಲೇ ಮನೆಗೆ ಬಂದಿದ್ದ ಸಿದ್ದನಗೌಡ, ಚಾಕುವಿನಿಂದ ತನ್ನ ಭಾವನಿಗೆ ಇರಿದಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಯೋದ ಕರಿಸಿದ್ದಪ್ಪ ಸಾವನ್ನಪ್ಪಿದ್ದಾನೆ.

Share Post