Districts

ನಡೆದಾಡುವ ದೇವರ ಪಾರ್ಥಿವ ಶರೀರ ಮೆರವಣಿಗೆ

ವಿಜಯಪುರ; ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ‌ ಪಾರ್ಥಿವ ಶರೀರ ಜ್ಞಾನಯೋಗಾಶ್ರಮದಿಂದ ಮೆರವಣಿಗೆ ಮೂಲಕ ಸೈನಿಕ‌ ಶಾಲೆಯಲ್ಲಿ ಭಕ್ತರ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸೋಮವಾರ ಸಂಜೆ ಲಿಂಗೈಕ್ಯರಾದ ಶ್ರೀಗಳನ್ನ ಮುಂಜಾನೆವರೆಗೂ ಆಶ್ರಮದಲ್ಲೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಬಳಿಕ ಭಕ್ತಾದಿಗಳ ದರ್ಶನಕ್ಕೆ ಅನುಕೂಲ ಮಾಡಿಕೊಡಲು ಸೈನಿಕ ಶಾಲೆಗೆ ಮೆರವಣಿಗೆ ಮೂಲಕ ಶ್ರೀಗಳ ಪಾರ್ಥಿವ ಶರೀರವನ್ನು ತರಲಾಗಿದೆ. ಮೆರವಣಿಗೆಯಲ್ಲಿ ಅಪಾರವಾದ ಜನಸಾಗರದ ಮದ್ಯೆ ಶ್ರೀಗಳ ಪಾರ್ಥಿವ ಶರೀರ ಸೈನಿಕ ಶಾಲೆ ಆವರಣ ತಲುಪಿದೆ. ಸೈನಿಕ‌ ಶಾಲೆ ಆವರಣದಲ್ಲಿ ಸಂಜೆ 4 ಗಂಟೆ ವರೆಗೂ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಶ್ರೀಗಳ ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ನಾಡಿನ‌ ಮೂಲೆ ಮೂಲೆಗಳಿಂದ ಭಕ್ತರು ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ನಗರದಲ್ಲೆಡೆ ಜನಸ್ತೋಮ ಹರಿದು ಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ನಗರದಾದ್ಯಂತ ಬಿಗಿಪೊಲೀಸ್ ಬಂದೋಬಸ್ತ್ ನ್ನ ಜನರನ್ನ‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.ಸಂಜೆ ವರೆಗೂ ಇನ್ನೂ ಹೆಚ್ಚಿನ ಜನ ಆಗಮಿಸುವ ಸಾದ್ಯತೆ ದಟ್ಟವಾಗಿದೆ.

Share Post