CrimeDistricts

ಲಾರಿ ಟೈಯರ್ ಸ್ಪೋಟ; ಲಾರಿ ಚಾಲಕ ಸ್ಥಳದಲ್ಲೇ ದುರ್ಮರಣ

ತುಮಕೂರು; ಲಾರಿ ಟೈಯರ್ ಬಿಸಿಯಾಗಿದೆ ಎಂದು ನೋಡಲು ಹೋದಾಗ ಟೈರ್‌ ಸ್ಫೋಟಗೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೆ.ಬಿ‌.ಕ್ರಾಸ್ ಸಮೀಪ ಇಂಡಿಸ್ಕೆರೆ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಕೊರಟಗೆರೆ ತಾಲ್ಲೂಕಿನ ಸೋಂಪುರ ಗ್ರಾಮದ ಲಾರಿ ಚಾಲಕ ವೆಂಕಟೇಶ್(43) ಸ್ಥಳದಲ್ಲೆ ಮೃತಪಟ್ಟಿದ್ದಾರೆ. 14 ಚಕ್ರದ ಭಾರತ್ ಬೆನ್ಜ್ ಲಾರಿ ಚಾಲಕರಾಗಿದ್ದ ವೆಂಕಟೇಶ್ ತಿಪಟೂರು ಕಡೆಯಿಂದ ತುಮಕೂರು ಕಡೆಗೆ ಬರುವ ವೇಳೆ ಈ ದುರ್ಘಟನೆ ನಡೆದಿದೆ. ಟೈರ್‌ ಗಳು ಬಿಸಿಯಾಗಿದ್ದರಿಂದ ಲಾರಿ ನಿಲ್ಲಿಸಿ ಪರೀಕ್ಷಿಸಲು ಹೋದಾಗ, ಟೈರ್ ಸ್ಪೋಟಗೊಂಡಿದೆ.

 

Share Post