Districts

ತುಮಕೂರು ಯಾರಪ್ಪನ ಸ್ವತ್ತಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ: ತುಮಕೂರಿನಿಂದ ಜೆಡಿಎಸ್‌ ಅನ್ನು ಓಡಿಸಿ ಎಂಬ ಸಿದ್ದರಾಮಯ್ಯನವರ ಮಾತಿಗೆ ಕುಮಾರಸ್ವಾಮಿ ಗರಂ ಆಗಿದ್ರು. ಸರಣಿ ಟ್ವೀಟ್‌ ಮೂಲಕ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕುಮಾರಸ್ವಾಮಿಗೆ ಇಂದು ಬಾಗಲಕೋಟೆಯಲ್ಲಿ ಸಿದ್ದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿಗೆ ಸಾಮಾನ್ಯ ಜ್ಞಾನವೂ ಇಲ್ಲದಂತೆ ಆಡ್ತಾರೆ ಅಂತಹವರಿಗೆ ನಾನೇನು ಮಾಡೋಕಾಗುತ್ತೆ?ಜೆಡಿಎಸ್‌ ಓಡಿಸಿ ಅಂತ ನಾನು ಹೇಳಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಹೇಳುವ ಹಕ್ಕಿ ನನಗಿಲ್ವಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಆಸ್ತಿನಾ ಅಂತ ಕೇಳ್ತಾರಲ್ಲ. ತುಮಕೂರು ನಮ್ಮಪ್ಪನ ಆಸ್ತಿನೂ ಅಲ್ಲ, ಕುಮಾರಸ್ವಾಮಿ ಅಪ್ಪನ ಆಸ್ತಿಯೂ ಅಲ್ಲ. ಹೆಚ್ಡಿಕೆಗೆ ಯಾವಾಗ ಕೋಪ ಬರುತ್ತೋ ಯಾರಿಗೆ ಗೊತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳನ್ನು ಸಹಿಸಿಕೊಳ್ಳಬೇಕು. ಸಹಿಸಿಕೊಳ್ಳುವವರಿಗೆ ಮಾತ್ರ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಚಾಟಿ ಬೀಸಿದ್ರು.

Share Post