CrimeDistricts

ದರ್ಗಾಗೆ ಡಿಕ್ಕಿ ಹೊಡೆದ ಕಾರು; ಮೂವರ ದಾರುಣ ಸಾವು

ಕುಂದಗೋಳ; ಇಲ್ಲಿ ಜಿಗಳೂರು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ದರ್ಗಾಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ರವೀಂದ್ರ ಲಕ್ಷ್ಮಿಕಾಂತ್ ನಾಗನಾಥ್ (56), ಅವರ ಮಾವ ನಿವೃತ್ತ ಸ್ಟಾಫ್‌ನರ್ಸ್ ಹುಬ್ಬಳ್ಳಿ ನವನಗರದ ಹನುಮಂತಪ್ಪ ಗೂರಪ್ಪ ಬೇವಿನಕಟ್ಟೆ (70), ಅತ್ತೆ ನಿವೃತ್ತ ಸ್ಟಾಫ್‌ನರ್ಸ್ ರೇಣುಕಾ ಹನುಮಂತಪ್ಪ ಬೇವಿನಕಟ್ಟಿ (68) ಮೃತಪಟ್ಟವರು. ಘಟನೆಯಲ್ಲಿ ರವೀಂದ್ರ ಅವರ ಪತ್ನಿ ಅರುಂಧತಿ ರವೀಂದ್ರ ನಾಗನಾಥ್ (48) ತೀವ್ರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಗೃಹ ಪ್ರವೇಶ ಸಮಾರಂಭ ಮುಗಿಸಿಕೊಂಡು ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post