Districts

ಪ್ರೇಮಿಗಳಿಗೆ ಮದುವೆ ಮಾಡಿಸಿದ ಪಿಡಿಓ: ಸಾಕ್ಷಿಯಾದ ಗ್ರಾ.ಪಂ.ಸದಸ್ಯರು

ಮೈಸೂರು: ಗಾಮ ಪಂಚಾಯಿತಿಯಲ್ಲೇ ಪ್ರೇಮಿಗಳ ಮದುವೆ ಮಾಡಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹರದನಹಳ್ಳಿಯಲ್ಲಿ ನಡೆದಿದೆ.

ಹರದನಹಳ್ಳಿಯ ವಾರ್ಡ್‌ ಮಟ್ಟದಲ್ಲಿರುವ ಕುಂದು ಕೊರತೆಗಳನ್ನು ನಿವಾರಿಸಲು ಅಲ್ಲಿನ ಪಿಡಿಓ ಇಂದು  ಸಭೆ ಕರೆದಿದ್ದರು. ಸಭೆ ನಡೆಯುತ್ತಿದ್ದ ವೇಲೆ ಕಚೇರಿ ಪಕ್ಕದ ಮನೆಯಿಂದ ಗಲಾಟೆ ಶಬ್ದ ಕೇಳಿ ಸ್ತಳಕ್ಕೆ ತೆರಳಿದ ಪಿಡಿಓ ಸಮಸ್ಯೆಯನ್ನು ಕೇಳಿದ್ದಾರೆ. ಬಸವರಾಜ್‌ ಸುಚಿತ್ರಾ ಎಂಬುವವರು ಒನ್ನರನ್ನೊಬ್ಬರು ಪ್ರೀತಿ ಮಾಡಿದ್ದು, ಈ ಪ್ರೀತಿಗೆ ಎರಡೂ ಮನೆಯವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಗಲಾಟೆ ಶುರುವಾಗಿತ್ತು. ಇದನ್ನರಿತ ಪಿಡಿಓ ಇಬ್ಬರ ಪೋಷಕರ ಮನವೊಲಿಸಿ ಪ್ರೇಮಿಗಳ ಮದುವೆ ಮಾಡಿಸಿದ್ದಾರೆ.

ಈ ಮದುವೆಗೆ ಸಭೆಗೆ ಬಂದಿದ್ದ ಸುತ್ತಮುತ್ತಲ ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಸಾಕ್ಷಿಯಾದ್ರು. ಪ್ರೇಮಿಗಳಿಬ್ಬರು ಹೊಂದಿಕೊಂಡು ಜೀವನ ನಡೆಸುವಂತೆ ಸಲಹೆ ನೀಡಿ ನವಜೋಡಿಯನ್ನು ಹಾರೈಸಿದ್ರು.

Share Post