Districts

ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪಗೊಳಿಸಿದ ಕಿಡಿಗೇಡಿಗಳು

ಬೆಳಗಾವಿ : ಆನಗೋಳದ ಕನಕದಾಸ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೂರ್ತಿಯನ್ನು ಕಿಡಿಗೇಡಿಗಳು ಶನಿವಾರ ನಸುಕಿನಜಾವ ವಿರೂಪಗೊಳಿಸಿದ್ದಾರೆ.

ಮೂರ್ತಿಯ ಮುಖವನ್ನು ವಿರೂಪಗೊಳಿಸಿರುವುದರ ಜೊತೆಗೆ ಕೈಯಲ್ಲಿನ ಖಡ್ಗವನ್ನು ಕಿತ್ತು ಹಾಕಿದ್ದಾರೆ. ತಿಲಕವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೇ ಗಲಾಟೆ ನಡೆಯದಿರಲಿ ಎಂಬ ಕಾರಣಕ್ಕೆ ಮೂರ್ತಿಯ ಬಳಿ ಪೊಲೀಸ್‌ ಅನ್ನು ನಿಯೋಜಿಸಲಾಗಿದೆ.

Share Post