CrimeDistricts

ಬದಲಿ ಸೈಟು ಹಂಚಿಕೆ ಪ್ರಕರಣ; ಮುಡಾ ಕಚೇರಿ ಮೇಲೆ ED ದಾಳಿ!

ಮೈಸೂರು; ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಚುನಾವಣೆಯ ನಂತರ ಇಡಿ ಅಧಿಕಾರಿಗಳು ಆಕ್ಟೀವ್‌ ಆಗಲಿದ್ದಾರೆ.. ಮುಡಾ ಪ್ರಕರಣದಲ್ಲಿ ಅಖಾಡಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು.. ಅಂದುಕೊಂಡಂತೆಯೇ ಆಗಿದೆ.. ಇಂದು ಇಡಿ ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.. ಇಂದು ಬೆಳಗ್ಗೆಯೇ ಮೈಸೂರು ಮುಡಾ ಕಚೇರಿಗೆ ಭೇಟಿ ನೀಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ..
ಮುಡಾ ಅನುದಾನ ದುರ್ಬಳಕೆ, ಬದಲಿ ಸೈಟು ಹಂಚಿಕೆಯಲ್ಲಿ ಅಕ್ರಮ ಆಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧವೂ ತನಿಖೆ ನಡೆಯುತ್ತಿದೆ.. ಹೀಗಿರುವಾಗಲೇ ಈ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.. ಸುಮಾರು 20 ಕ್ಕೂ ಹೆಚ್ಚು ಅಧಿಕಾರಿಗಳು ಮುಡಾ ಕಚೇರಿಗೆ ಬಂದಿದ್ದು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ..

Share Post