Districts

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್‌ ಭೀಕರ ಕೊಲೆ; ಆರೋಪಿ ಶರಣು

ಹುಬ್ಬಳ್ಳಿ: ಕಳೆದ ರಾತ್ರಿ ಹುಬ್ಬಳ್ಳಿಯ ಅರವಿಂದ ನಗರದಲ್ಲಿ ಭೀಕರ ಕೊಲೆಯೊಂದು ನಡೆದುಹೋಗಿದೆ. ಇಲ್ಲಿನ ಪಿಎನ್‌ಟಿ ಕ್ವಾರ್ಟರ್ಸ್‌ನ ಹಿಂಭಾಗದಲ್ಲಿ ನಡೆದುಹೋಗುತ್ತಿದ್ದ ರೌಡಿಶೀಟರ್‌ ಅಕ್ಬರ್‌ ಅಲ್ಲಾಭಕ್ಷ್‌ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿತ್ತು. ಇಂದು ಸದಾನಂದ ಬುರ್ಲಿ ಎಂಬಾತ ತಾನೇ ಕೊಲೆ ಮಾಡಿದ್ದಾಗಿ ಹಳೇ ಹುಬ್ಬಳ್ಳಿ ಠಾಣೆಗೆ ಶರಣಾಗಿದ್ದಾರೆ. 

      ತಿರವಿನಹಕ್ಕಲ ರಮೇಶ ನೀರಗಂಟಿ ಹಾಗೂ ಇಂದಿರಾನಗರದ ನವೀನ್‌ ಎಂಬುವವರೊಂದಿಗೆ ಸೇರಿ ಅಕ್ಬರ್‌ ಅಲ್ಲಾ ಭಕ್ಷ್‌ ಅವರನ್ನು ಕೊಲೆ ಮಾಡಿರುವುದಾಗಿ ಸದಾನಂದ ಬುರ್ಲಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ತೊರವಿಹಕ್ಕಲದ ನಿವಾಸಿಯಾಗಿದ್ದ ಅಕ್ಬರ ಅಲ್ಲಾಭಕ್ಷ್‌ ಮುಲ್ಲಾ, ಕಳೆದ ರಾತ್ರಿ 11.30ರ ಸುಮಾರಿಗೆ ಮನೆಗೆ ಹೋಗುವ ಸಂದರ್ಭದಲ್ಲಿ ದಾಳಿ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಕೊಲೆ ಹಿಂದೆ ಬೇರೆಯವರ ಕೈವಾಡ ಇರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share Post