Districts

ಪ್ರವಾಹದಿಂದ ರಸ್ತೆ ಜಲಾವೃತ; ನೀರಿನಲ್ಲಿ ಸಿಲುಕಿದ್ದ ಜೀಪ್‌ ದಡಕ್ಕೆ..!

ಕೊಡಗು; ಕಾವೇರಿ ನದಿ ನೀರಿನ ಪ್ರವಾಹ ಉಂಟಾಗಿ ರಸ್ತೆಯೇ ಮುಳುಗಿಹೋಗಿದೆ. ಹೀಗಾಗಿ ಜೀಪೊಂದು ನೀರಿನಲ್ಲಿ ಮುಳುಗಿ ಅದರಲ್ಲಿದ್ದವರು ಪರದಾಡಿದ ಗಟನೆ ಕೊಡಗು ಜಿಲ್ಲೆ ನಾಪೋಕ್ಲುವಿನ ಹೊದ್ದೂರು ಬೊಳಿಬಾಣೆ ಎಂಬಲ್ಲಿ ನಡೆದಿದೆ. ನಂತರ ಸ್ಥಳೀಯಲ್ಲಿ ಜೀಪ್‌ನಲ್ಲಿದ್ದವರನ್ನು ರಕ್ಷಿಸಿದ್ದು, ನಂತರನ್ನೂ ಜೀಪನ್ನೂ ದಡ ಸೇರಿಸಿದ್ದಾರೆ.

   ಮೂರ್ನಾಡು ಕಡೆಯಿಂದ ಅಯ್ಯಂಗೇರಿ ಗ್ರಾಮಕ್ಕೆ ನೀಲಿ ಬಣ್ಣದ ಜೀಪಿನಲ್ಲಿ ಮಹಿಳೆ ಸೇರಿದಂತೆ ಮೂರು ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಆದ್ರೆ ಸವಲ್ಪವೇ ನೀರಿರಬಹುದೆಂದು ಭಾವಿಸಿ ಚಾಲಕ ಜೀಪನ್ನು ನೀರಿನಲ್ಲಿ ನುಗ್ಗಿಸಿದ್ದಾನೆ. ಈ ವೇಳೆ ಜೀಪ್‌ ಮಧ್ಯದಲ್ಲೇ ಸಿಲುಕಿದೆ.

  ನೀರು ಜಾಸ್ತಿ ಇದ್ದುದರಿಂದ ನೀರಿನ ಮಧ್ಯದಲ್ಲೇ ಜೀಪ್‌ ಆಫ್‌ ಆಗಿದೆ.  ಇದರಿಂದ ಜೀಪಿನಲ್ಲಿದ್ದವರು ಆತಂಕಕ್ಕೀಡಾಗಿದ್ದರು. ಇದೇ ಸ್ಥಳಕ್ಕೆ ಪ್ರವಾಹ ವೀಕ್ಷಣೆಗೆ ಬಂದ ಕೊಟ್ಟಮುಡಿ ನಿವಾಸಿಗಳಾದ ಮೊಹಮ್ಮದ್ ಹಾಗೂ ಅಬ್ದುಲ್ಲಾ ಎಂಬುವವರಿಗೆ ರಸ್ತೆ ಮಧ್ಯದ ಪ್ರವಾಹದ ನೀರಿನಲ್ಲಿ ಜೀಪು ನಿಂತಿರೋದು ಗೋಚರಿಸಿದೆ. ಕೂಡಲೇ ಕಾರ್ಯಪ್ರವತ್ತರಾಗಿ ಸ್ವಗ್ರಾಮದ ಜನರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಸಹಾಯದಿಂದ ಜೀಪ್​​ ಅನ್ನು ನೀರಿನಿಂದ ಎಳೆದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Share Post