Districts

ಕಲ್ಲು ಕ್ವಾರಿ ದುರಂತ ಪ್ರಕರಣ; ಉತ್ತರ ಪ್ರದೇಶದ ಮೂವರು ಕಾರ್ಮಿಕರ ದುರ್ಮರಣ

ಚಾಮರಾಜನಗರ: ಕಲ್ಲು ಕ್ವಾರಿಯಲ್ಲಿ ನಿನ್ನೆ ಗುಡ್ಡ ಕುಸಿದ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವ ಖಚಿತವಾಗಿದೆ. ಇಲ್ಲಿನ ಮಡಹಳ್ಳಿ ಬಳಿ ಕಲ್ಲು ಕ್ವಾರಿಯಲ್ಲಿ ಕೆಲಸದ ವೇಳೆ ಟಿಪ್ಪರ್‌ ಮೇಲೆ ಗುಡ್ಡ ಕುಸಿದುಬಿದ್ದಿತ್ತು. ಇದರಡಿ ಸಿಲುಕಿದ್ದ ಮೂವರು ಮೃತಪಟ್ಟಿದ್ದು, ಮೂವರ ಮೃತದೇಹಗಳನ್ನೂ ಹೊರತೆಗೆಯಲಾಗಿದೆ.

ಮೃತ ಮೂವರು ಕಾರ್ಮಿಕರೂ ಉತ್ತರ ಪ್ರದೇಶ ಮೂಲದವರು ಎಂದು ತಿಳಿದುಬಂದಿವೆ. ಗೋರಖ್ ಪುರದ ಹಜೀಂ ಉಲ್ಲ (24), ಮಿರಾಜ್ (28) ಹಾಗೂ ಸರ್ಫ್ ರಾಜ್ (18) ಅವರು ಮೃತಪಟ್ಟವರು. ಹಜೀಂ ಉಲ್ಲಾ ಹಾಗೂ ಮಿರಾಜ್ ಅವರು ಹಿಟಾಚಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಸರ್ಫರಾಜ್ ಅವರು ಸಹಾಯಕರಾಗಿದ್ದರು ಎಂದು ತಿಳಿದುಬಂದಿದೆ.

Share Post