DistrictsPolitics

ಸ್ವಪಕ್ಷದವರಿಂದಲೇ ಪ್ರತಾಪ ಸಿಂಹಗೆ ಟಾಂಗ್‌

ಮೈಸೂರು; ಬೆಂಗಳೂರು – ಮೈಸೂರು ದಶಪಥ ರಸ್ತೆಗೆ ನಾಮಕರಣ ವಿಚಾರ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ ಕ್ಕೆ ಸ್ವಪಕ್ಷದ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಈಗಾಗಲೇ ಮೈಸೂರು-ಬೆಂಗಳೂರು ಎಕ್ಸ್‌ ಪ್ರೆಸ್ ಹೈವೇ ಗೆ ಕಾವೇರಿ ಎಕ್ಸಪ್ರೆಸ್ ಹೈ ವೇ ಹೆಸರು ಇಡಲು ಸಂಸದ ಪ್ರತಾಪ್ ಸಿಂಹ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ .

ಬಿಜೆಪಿ ಮುಖಂಡ ರಘು ಕೌಟಿಲ್ಯ ಸಂಸದರ ತೀಮಾ೯ನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಲ್ವಡಿಯವರ ಹೆಸರಿಗೆ ಅಪಸ್ವರದ ಅಪಪ್ರಚಾರ ನಡೆಯುತ್ತಿದೆ. ಈ ಯುಗದಲ್ಲಿ ರಾಮರಾಜ್ಯದ ಕನಸು ಕಂಡವರು ನಮ್ಮ ನಾಲ್ವಡಿ ಪ್ರಭುಗಳು. ಕನ್ನಂಬಾಡಿ ಕಟ್ಟೆ ನಾಲ್ವಡಿಯವರ ಕೊಡುಗೆ . ನಾಲ್ವಡಿ ಯವರ ಹೆಸರು ನಾಮಕರಣ ಮಾಡುವಂತೆ ರಾಜ್ಯದ ಹಿರಿಯ ಮುತ್ಸದ್ದಿಗಳಾದ ಎಸ್. ಎಂ. ಕೃಷ್ಣರವರು ಹಾಗೂ ಶ್ರೀನಿವಾಸ್ ಪ್ರಸಾದ್ ಬೆಂಬಲ ನೀಡಿದ್ದಾರೆ. ಆದರೆ ನಮ್ಮ ಸಂಸದರು ಕಾವೇರಿ ಹೆಸರಿನ ಮತ ಒಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆ ಅದನ್ನ ಮೊದಲು ನಿಲ್ಲಿಸಬೇಕು. ನಾಲ್ವಡಿ ಯವರ ಹೆಸರನ್ನು ಬದಿಗೆ ಸರಿಸುವ ಉದ್ದೇಶದಿಂದ ನದಿಗಳ ಪಾಂಡಿತ್ಯ ಪ್ರದರ್ಶನ ಬೇಡ..ಈ ವಿಚಾರ ಮೂಲ ಮೈಸೂರಿಗರ ಅತ್ಮಾಭಿಮಾನವನ್ನು ಕೆಣಕಿದಂತೆ ಅಗುತ್ತೆ ಎಂದು ಬಿಜೆಪಿ ಮುಖಂಡ ರಘು ಕೌಟಿಲ್ಯ ಸಂಸದ ಪ್ರತಾಪ್ ಸಿಂಹಗೆ ಸರಣಿ ಟ್ವಿಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.

Share Post