DistrictsPolitics

ಚಾಮರಾಜನಗರಕ್ಕೆ ಬಂದಿರುವುದೇ ನನ್ನ ಪುಣ್ಯ; ಸಿಎಂ ಬೊಮ್ಮಾಯಿ

ಚಾಮರಾಜನಗರ; ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಅಂತಾರೆ. ಈ ಬಗ್ಗೆ ಬಹಳ ಜನ ಹೇಳಿದ್ದಾರೆ. ಆದ್ರೆ ನಾನು ಇಲ್ಲಿಗೆ ಬಂದಿರುವುದರಿಂದ ನಾನೇ ಪುಣ್ಯವಂತ. ಇಲ್ಲಿಗೆ ಬರದಿದ್ದರೆ ದೊಡ್ಡ ಕೊರತೆ ಅನುಭವಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ನಿಮ್ಮನ್ನೆಲ್ಲ ನೋಡಿ ನನಗೆ ಹೃದಯ ತುಂಬಿದೆ ಎಂದು ಚಾಮರಾಜನಗರ ಜನರನ್ನುದ್ದೇಶಿಸಿ ಹೇಳಿದ ಸಿಎಂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಮ್ಮನ್ನು ಆಶೀರ್ವದಿಸಲು ಬಂದಿದ್ದೀರುವುದಕ್ಕೆ ನಾನು ಧನ್ಯ ಎಂದು ಹೇಳಿದರು. ನಿಮ್ಮ ಒಳ್ಳೆಯತನ, ಕಣ್ಣಲ್ಲಿರುವ ಭಾವನೆ ನನ್ನ ಮನ ಮುಟ್ಟಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಗಡಿ ಜಿಲ್ಲೆಗಳ ಅಭಿವೃದ್ಧಿಗೆ ಶ್ರಮ ವಹಿಸುತ್ತಿದೆ. 1500 ಗಡಿ ಗ್ರಾಮಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಮುಂದಾಗಿದೆ. ಇದಕ್ಕಾಗಿ ನೂರು ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Share Post