Districts

ಶ್ರೀಗಳು ಒಪ್ಪಿಗೆ ಕೊಟ್ಟರೆ ಸರ್ಕಾರದಿಂದಲೇ ಚಿಕಿತ್ಸೆ; ಪ್ರಹ್ಲಾದ್ ಜೋಷಿ

ಗದಗ: ಶ್ರೀಗಳು ಒಪ್ಪಿಗೆ ಕೊಟ್ಟರೆ ಶ್ರೀಗಳ ಚಿಕಿತ್ಸೆ ಜವಾಬ್ದಾರಿ ಯನ್ನ ಭಾರತ ಸರ್ಕಾರ, ಹಾಗೂ ಕರ್ನಾಟಕ ಸರ್ಕಾರವೇ ವಹಿಸಿಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ನಿತ್ಯವೂ ಶ್ರೀಗಳ ಆಪ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಶ್ರೀಗಳು ಒಪ್ಪಿಗೆಕೊಟ್ರೆ ಎಲ್ಲ ರೀತಿಯ ಚಿಕಿತ್ಸೆಗೆ ಭಾರತ ಸರ್ಕಾರ, ಕರ್ನಾಟಕ ಸರ್ಕಾರ ತಯ್ಯಾರಿ ಇದ್ದೇವೆ. ಏನು ಅಗತ್ಯವಿದೆಯೋ ಅದರಂತೆ ಎಲ್ಲಿ ಬೇಕಾದ್ರೂ ಚಿಕಿತ್ಸೆ ಕೊಡಿಸೊದಕ್ಕೆ ತಯಾರಿದ್ದೇವೆ ನಾವು ಚಿಕಿತ್ಸೆ ಕೊಡ್ತೀವಿ ಎಂದು ಶ್ರೀಗಳನ್ನ ಕೇಳಿದಾಗ ಸಿದ್ದೇಶ್ವರ ಶ್ರೀಗಳು ಕೈಮುಗಿದು ನಮಸ್ಕಾರ ಮಾಡಿ ನಿಮ್ಮ ಕಾಳಜಿಗೆ ಕಳಕಳಿ ಧನ್ಯವಾದ ಎಂದು ಹೇಳಿದ್ದಾರೆ.

ಶ್ರೀಗಳು ಮಹಾವಿಭೂತಿ ಪುರುಷರು. ಪುಣ್ಯದಜೀವ..ಇನ್ನೂ ಕೆಲ ವರ್ಷಗಳ ಕಾಲ ನಮ್ಮ ಜೊತೆ ಗಟ್ಟಿಯಾಗಿ ಇದ್ದು ಮಾರ್ಗದರ್ಶನ ಮಾಡಲಿ ಅನ್ನೋ ಅಪೇಕ್ಷೆ ನಮ್ಮದು…ಶ್ರಿಗಳು ಗುಣಮುಖರಾಗಲು ನಮ್ಮ ಸಂಪೂರ್ಣ ಪ್ರಯತ್ನ ಇದೆ ಎಂದರು‌.

Share Post