Districts

ಸಿದ್ದರಾಮಯ್ಯ ಕಾಂಗ್ರೆಸ್‌ ಪಾಲಿನ ಭಸ್ಮಾಸುರ:ಹೆಚ್.ವಿಶ್ವನಾಥ್‌ ವಾಗ್ದಾಳಿ

ಮೈಸೂರು: ವಿಪಕ್ಷ ನಾಯಕರ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದ್ದಾರೆ.  ಸಿದ್ದರಾಮಯ್ಯ ಯಾರನ್ನೂ ಬೆಳೆಸುವುದಿಲ್ಲ. ನಾವು 17ಜನ ಪಕ್ಷ ಬಿಟ್ಟು ಬಂದಾಗ ಏನೆಲ್ಲ ಮಾತನಾಡಿದ್ರು. ರಮೇಶ್‌ ಕುಮಾರ್‌ ಕೈಯಲ್ಲಿ ಏನೆಲ್ಲಾ ಮಾಡಿಸಿದ್ರು ಎಂಬುದು ನನಗೆ ಗೊತ್ತಿದೆ. ಅವರ ಜೊತೆ ಮಲಗಿದ್ರೆ ಪಾವಿತ್ರ್ಯತೆ, ನಮ್ಮ ಜೊತೆ ಮಲಗಿದ್ರೆ ಅನೈತಿಕತೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಎಸ್‌.ಆರ್.ಪಾಟೀಲ್‌ರನ್ನು ಮುಗಿಸಿದ್ದು ಸಿದ್ದರಾಮಯ್ಯ, ಚಿಮ್ಮನಕಟ್ಟಿ ಮನೆ ಹಾಳಾಗಿದ್ದು ಕೂಡ ಸಿದ್ದರಾಮಯ್ಯರಿಂದಲೇ..ಖರ್ಗೆ ಎಸ್‌.ಎಂ.ಕೃಷ್ಣ ಸಹಕರಿಸಿದ್ದಕ್ಕೆ ಕಾಂಗ್ರೆಸ್‌ ಸೇರಿದ್ರು. ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದಿಲ್ಲ. ಅವರು ಕುರುಬರನ್ನು ಬೆಳೆಸಲಿಲ್ಲ, ಎಲ್ಲರನ್ನು ಮುಗಿಸಿದ್ರು. ಈಗ ಕುರುಬ ಕ್ಷೇತ್ರಗಳಿಗೆ ಬೇರೆಯವರನ್ನು ಕರೆತರುತ್ತಿದ್ದಾರೆ. ಸಿದ್ದರಾಮಯ್ಯ ಯಾರನ್ನೂ ಬೆಳೆಯಲು ಬಿಡುವುದಿಲ್ಲ. ರಾಜಕೀಯದ ಬಿಳಿ ಬಟ್ಟೆ ಅವರು ಬಿಟ್ಟು ಬೇರೆ ಯಾರೂ ಹಾಕುವಂತಿಲ್ಲ.

ನನ್ನ, ಹೆಚ್.ಎಂ.ರೇವಣ್ಣರನ್ನು ಮುಗಿಸಿದ್ರು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ರೋಷನ್‌ ಬೇಗ್‌ ಎಲ್ಲಿ ಹೋದ್ರು? ಇವರೆಲ್ಲರನ್ನು ಮುಗಿಸಿದ್ದು ಸಿದ್ದರಾಮಯ್ಯ. ಕಾಂಗ್ರೆಸ್‌ ಪಕ್ಷದ ತತ್ವ ಸಿದ್ದಾಂತ ಬೇರೆ, ಸಿದ್ದರಾಮಯ್ಯ ತತ್ವ ಸಿದ್ದಾಂತ ಬೇರೆ. ಸಿದ್ದರಾಮಯ್ಯ ಕಾಂಗ್ರೆಸ್‌ ಪಾಲಿನ ಭಸ್ಮಾಸುರ. ಕಾಂಗ್ರೆಸ್‌ ಪಕ್ಷವನ್ನು ಮುಗಿಸಿಯೇ ಅವರು ಹೋಗುವುದು ಎಂದು ಮೈಸೂರಿನಲ್ಲಿ ಎಂಎಲ್‌ಸಿ ಹೆಚ್.ವಿಶ್ವನಾಥ್‌ ಆಕ್ರೋಶ ವ್ಯಕ್ತಪಡಿಸಿದ್ರು.

Share Post