DistrictsNews

ಮೈಸೂರು ಅರಮನೆ ಛಾವಣಿ ಸೋರಿಕೆ

ಮೈಸೂರು : ಸತತ ಮಳೆಯಿಂದಾಗಿ ಮೈಸೂರಿನ ಅಂಬಾವಿಲಾಸ ಅರಮನೆಯ ಚಾವಣಿ ಸೋರುತ್ತಿದೆ. ಕೆಲವೆಡೆ ಗಾರೆ ಕಿತ್ತು ಬಂದಿದೆ. ಗೋಡೆಗಳಿಗೆ ಶೀತ ಆವರಸಿಕೊಂಡಿದೆ.

ಈ ಹಿಂದೆಯೂ ಅರಮನೆಯ ಚಾವಣಿ ಸೋರಿಕೆ ಕಂಡುಬಂದಿತ್ತು. ಶೀಘ್ರವಾಗಿ ದುರಸ್ತಿ ಕಾರು ಕೈಗೊಂಡು ಸರಿಪಡಿಸಲಾಗಿತ್ತು. ಈಗ ಸುರಿದಿರುವ ಸತತ ಮಳೆಯಿಂದಾಗಿ ಮತ್ತೆ ಸೋರಿಕೆ ಉಂಟಾಗಿದೆ.

ರಾಜವಂಶಸ್ಥರು ವಾಸಿಸುತ್ತಿರುವ ಜಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆ ಆಗುತ್ತಿದ್ದರೂ ಸರ್ಕಾರ ಯಾವುದೇ ದುರಸ್ತಿ ಕಾರ್ಯ ಕೈಗೊಳ್ಳದೆ ನಿರಾಸಕ್ತಿ ತೋರಿಸಿದೆ ಎಂದು ರಾಣಿ ಪ್ರಮೋದಾ ದೇವಿಯವರು ಅಸಮಾಧಾನ ಹೊರಹಾಕಿದ್ದಾರೆ.

Share Post