CrimeDistricts

ಭದ್ರಾವತಿ ಶಾಸಕ ಸಂಗಮೇಶ್‌ ಪುತ್ರನ ಕೊಲೆಗೆ ಜೈಲಿಂದಲೇ ಸ್ಕೆಚ್‌!

ಶಿವಮೊಗ್ಗ(Shimoga); ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್‌ ಅವರ ಪುತ್ರ ಹತ್ಯೆಗೆ ಸ್ಕೆಚ್‌ ಹಾಕಲಾಗಿದೆ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ.. ಶಾಸಕ ಸಂಗಮೇಶ್‌ ಪುತ್ರ ಬಸವೇಶ್‌ ಅವರ ಕೊಲೆ ಮಾಡಲು ಜೈಲಿನಿಂದಲೇ ಪ್ಲ್ಯಾನ್‌ ರೂಪಿಸಲಾಗಿದೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸ್ಕ್ರೂ ಡ್ರೈವರ್‌ನಿಂದ ಪತ್ನಿಯನ್ನು ಚುಚ್ಚಿ ಚುಚ್ಚಿ ಕೊಂದ ಪಾಪಿ!

ಡಿಚ್ಚಿ ಮುಬಾರಕ್‌ ಎಂಬಾತ ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾನೆ.. ಈತನೇ ಜೈಲಿನಲ್ಲಿ ಕುಳಿತು, ಜೈಲಿನ ಹೊರಗಿರುವ ಮುಬಾರಕ್‌ ಎಂಬಾತನಿಗೆ ಕೊಲೆ ಮಾಡುವ ಹೊಣೆ ವಹಿಸಿದ್ದ ಎಂದು ಹೇಳಲಾಗುತ್ತಿದೆ.. ಭದ್ರಾವತಿತ ಗಾಂಧಿ ಸರ್ಕಲ್‌ನಲ್ಲಿ ಬಸವೇಶ್‌ ಅವರನ್ನು ಕೊಲೆ ಮಾಡುವಂತೆ ಡಿಚ್ಚಿ ಮುಂಬಾರಕ್‌ ಸೂಚನೆ ಕೊಟ್ಟಿದ್ದ ಎಂದು ಹೇಳಲಾಗಿದೆ..

ಇದನ್ನೂ ಓದಿ; ನಾಳೆ ದೆಹಲಿಗೆ ಸಿಎಂ ಸಿದ್ದರಾಮಯ್ಯ!; ರಾಷ್ಟ್ರಪತಿ ಭೇಟಿಯಾಗ್ತಾರಾ..?

ಈ ಕೊಲೆ ಮಾಡೋದಕ್ಕೆ ಕಾರು ಹಾಗೂ ನಾಲ್ವರು ವ್ಯಕ್ತಿಗಳನ್ನು ಕಳುಹಿಸೋದಾಗಿಯೂ ಮುಬಾರಕ್‌ ಎಂಬಾತನಿಗೆ ಹೇಳಿದ್ದನಂತೆ.. ಇದೇ ವೇಳೆ ಮುಬಾರಕ್‌ ಹತ್ಯೆ ಮಾಡಲು ಚಾಕು ಖರೀದಿ ಮಾಡಿರೋದಾಗಿಯೂ ತೋರಿಸಿದ್ದ ಎಂದು ತಿಳಿದುಬಂದಿದೆ.. ಡಿಚ್ಚಿ ಮುಬಾರಕ್‌ ಈ ಸೂಚನೆ ಕೊಡುವಾಗ ಗುತ್ತಿಗೆದಾರ ಸುನಿಲ್‌ ಎಂಬಾತನ ಬಗ್ಗೆಯೂ ತಿಳಿಸಿದ್ದ ಎಂದು ತಿಳಿದುಬಂದಿದೆ..
ಈ ಸಂಬಂಧ ಮುಬಾರಕ್‌ ಹಾಗೂ ಇತರ ನಾಲ್ವರ ವಿರುದ್ಧ ಭದ್ರಾವತಿ ಪೊಲೀಸ್‌ ಠಾಣೆಯಲ್ಲಿಕೇಸ್‌ ದಾಖಲಾಗಿದ್ದು, ಶಾಸಕರ ಪುತ್ರ ಬಸವೇಶ್‌ಗೆ ಭದ್ರತೆ ನೀಡಲಾಗಿದೆ..

ಇದನ್ನೂ ಓದಿ; ಸ್ಮಶಾನದಲ್ಲಿ ಬೆಳೆದು ನಿಂತ ಗಾಂಜಾ ಗಿಡಗಳು!

Share Post