Districts

ಮತ್ತೆ ಎಂಇಎಸ್‌ ಕಾರ್ಯಕರ್ತರ ಉದ್ಧಟತನ

ಕಲಬುರಗಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಎಂಇಎಸ್‌ ಕಿಡಿಗೇಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಪುಂಡಾಟ ಕಂಡು ಕನ್ನಡಿಗರು ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೀಗ ಎಂಇಎಸ್‌ ಕಾರ್ಯಕರ್ತರು ಮತ್ತೆ ತಮ್ಮ ಕೈಚಳಕ ತೋರಿಸಿದ್ದಾರೆ. ಕಲ್ಯಾಣ ಕರ್ನಾಟಕದ ಸಾರಿಗೆ ಬಸ್‌ ಅನ್ನು ಕಾರ್ಯಕರ್ತರು ತಡೆದು, ಕಪ್ಪು ಮಸಿ ಬಳಿದು ಕಿಡಿಗೇಡಿಗಳು ಉದ್ಧಟತನ ಮೆರೆದಿದ್ದಾರೆ. ಮುಂಬೈನಿಂದ ಕಲಬುರುಗಿ ಕಡೆ ಬಸ್‌ ಬರುತ್ತಿತ್ತು.ಈ ವೇಳೆ ಪುಂಡರು ಬಸ್‌ ತಡೆದು, ಜೈ ಶಿವಾಜಿ ಅಂತಾ ಬರೆದಿದ್ದಾರೆ. ಬಸ್‌ ಎದುರು ಎಂಇಎಸ್‌ ಧ್ವಜ ಕಟ್ಟಿ, ಬಸ್‌ಗೆ ಕಪ್ಪು ಮಸಿ ಬಳಿದಿದ್ದಾರೆ. ಬಳಿಕ ಬಸ್‌ ಚಾಲಕನ ಕೈಗೆ ಎಂಇಎಸ್‌ ಧ್ವಜ ನೀಡಿ ಜೈ ಶಿವಾಜಿ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ. ಇದೀಗ ಅವರ ಪುಂಡಾಟಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,ಎಂಇಎಸ್ ಕಾರ್ಯಕರ್ತರ ವಿಕೃತಿ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Share Post