CrimeDistricts

ಕೆ.ಆರ್‌.ಪೇಟೆಯಲ್ಲಿ ಕುಖ್ಯಾತ ರೌಡಿ ಬರ್ಬರ ಹತ್ಯೆ

ಮಂಡ್ಯ; ಕೆ.ಆರ್.ಪೇಟೆ ಪಟ್ಟಣದ ಈಶ್ವರನ ದೇವಸ್ಥಾನ ಮುಂಭಾಗದಲ್ಲಿ ಹಾಡಹಗಲೇ ಕುಖ್ಯಾತ ರೌಡಿ  ಅರುಣ್‌ ಅಲ್ಲು ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈತನ ಉಪಟಳ ಹೆಚ್ಚಿದ್ದರಿಂದಾಗಿ ಗಡಿಪಾರು ಮಾಡಲಾಗಿತ್ತು. ಹೀಗಿದ್ದರೂ ಕೆ.ಆರ್‌.ಪೇಟೆಗೆ ಬಂದಿದ್ದ ರೌಡಿ ಅರುಣ್‌ ಅಲ್ಲುನನ್ನು ಐದು ಮಂದಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ದೇವಸ್ಥಾನದ ಬಳಿ ಹೊಂಚು ಹಾಕಿ ಕುಳಿತಿದ್ದ ಐದು ಮಂದಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಕೊಲೆಯಾಗಿರುವ ಅರುಣ್‌ ಅಲ್ಲು ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ. ಜೈಲಿನಲ್ಲಿದ್ದಾಗಲೇ ಅಧಿಕಾರಿಯ ಸಹಾಯ ಪಡೆದು ಮಾರ್ವಾಡಿ ಒಬ್ಬರನ್ನು ಕಿಡ್ನಾಪ್ ಮಾಡಿಸಿದ್ದ. ಜೈಲಿನಿಂದ ಬಂದ ಬಳಿಕ ಈತನನ್ನು ಪೊಲೀಸರು ಗಡಿಪಾರು ಮಾಡಿದ್ದರು. ಹಲವರ ಜೊತೆ ವೈಷಮ್ಯೆವನ್ನು ಬೆಳಸಿಕೊಂಡಿದ್ದ ಈತನನ್ನು ಕೊಲ್ಲುವುದಕ್ಕಾಗಿ ಕೆಲವರು ಕಾಯುತ್ತಿದ್ದರು ಎನ್ನಲಾಗಿದೆ.

Share Post