CrimeNational

ಹಿಮಾಲಯಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಬೆಂಗಳೂರು ವೈದ್ಯ ನಾಪತ್ತೆ..!

ಬೆಂಗಳೂರು; ಹಿಮಾಲಯ‌ಕ್ಕೆ ಟ್ರಕ್ಕಿಂಗ್​ ಗೆಂದು ಹೋಗಿದ್ದ ಬೆಂಗಳೂರಿನ ವೈದ್ಯರೊಬ್ಬರು ನಾಪತ್ತೆಯಾಗಿದ್ದಾರೆ. ಮಣಿಪಾಲ್ ಆಸ್ಪತ್ರೆ ವೈದ್ಯ ಚಂದ್ರಮೋಹನ್ ಕಾಣೆಯಾಗಿರುವ ವೈದ್ಯರು.  ಅವರು ಸಂಪರ್ಕಕ್ಕೆ ಸಿಗದೇ ಇದ್ದುದರಿಂದ ಆತಂಕಗೊಂಡಿರುವ ಅವರ ಕುಟುಂಬಸ್ಥರು, ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

   ವೈದ್ಯ ಚಂದ್ರಮೋಹನ್‌ ಅವರು ಬೆಂಗಳೂರಿನ ವಸಂತನಗರದ ನಿವಾಸಿ.  ಅವರು ಆಗಾಗ ಬೈಕ್​ನಲ್ಲಿ ಟ್ರಕ್ಕಿಂಗ್ ಮಾಡುತ್ತಿದ್ದರು.  ಕೆಲ ದಿನಗಳ ಹಿಂದೆ ಹಿಮಾಲಯಕ್ಕೆ‌ ಪರ್ವತಕ್ಕೆ ಚಾರಣ ಬೆಳೆಸಿದ್ದರು. ಆದರೆ, ಜೂನ್ 20 ರಿಂದ ಚಂದ್ರ ಮೋಹನ್ ಸಂಪರ್ಕಕ್ಕೆ‌ ಸಿಗುತ್ತಿಲ್ಲ.‌ ಅವರ ಪೋನ್ ನಂಬರ್ ಸ್ವಿಚ್ಡ್​​ ಆಫ್ ಆಗಿದೆ. ಇದರಿಂದ ಆತಂಕ ವ್ಯಕ್ತಪಡಿರುವ ಕುಟುಂಬಸ್ಥರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ‌ ಮಿಸ್ಸಿಂಗ್ ಕಂಪ್ಲೈಂಟ್ ನೀಡಿದ್ದಾರೆ‌.

Share Post