Districts

ಮುಂದಿನ ವರ್ಷದಿಂದ ಸಮವಸ್ತ್ರ ಗೊಂದಲವಾಗದಂತೆ ಕಾನೂನು ರಚನೆ : ಬಿ ಸಿ ನಾಗೇಶ್

ಬೆಂಗಳೂರು : ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ಮಾತನಾಡಿ ಹೈಕೋರ್ಟ್‌ ತೀರ್ಪನ್ನು ಆಧರಿಸಿ ಮುಂದಿನ ವರ್ಷದಿಂದ ವಿಶೇಷ ಕಾನೂನು ಜಾರಿಗೆ ತರುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚನೆ ಮಾಡುತ್ತೇವೆ ಎಂದು ಬಿ ಸಿ ನಾಗೇಶ್‌ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕಾಲೇಜಿಗೆ ಬರಬೇಕು. ಹೈಕೋರ್ಟ್‌ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು ಯಾವುದೇ ಕಾರಣಕ್ಕೂ ಆದೇಶವನ್ನು ಉಲ್ಲಂಘಿಸಬಾರದು. ಹಿಜಾಬ್‌, ಕೇಸರಿ ಶಾಲು ಯಾವುದಕ್ಕೂ ಅವಕಾಶ ಇಲ್ಲ ಎಂದು ಕೋರ್ಟ್‌ ಆದೇಶ ನೀಡಿದೆ ಅದನ್ನು ಪಾಲಿಸಲೇಬೇಕು ಎಂದು ತಿಳಿಸಿದರು.

ಇನ್ನು ಜಮೀರ್‌ ಅವರು ಹೇಳಿದ್ದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಬಿ ಸಿ ನಾಗೇಶ್‌, ಎಲುಬಿಲ್ಲದ ನಾಲಿಗೆ ಎಂದು ಏನೇನೋ ಮಾತನಾಡಬಾರದು. ಕಾಂಗ್ರೆಸ್‌ನವರ ಹೇಳಿಕೆಗಳೇ ಗೊಂದಲಮಯವಾಗಿದೆ ಎಂದು ಕಿಡಿ ಕಾರಿದರು.

Share Post