DistrictsPolitics

ಮೋದಿದು ಬುರುಡೆ ಭಾಷಣ; ಮಾಜಿ ಸಿಎಂ ಕುಮಾರಸ್ವಾಮಿ

ಬಾಗಲಕೋಟೆ; ಮೋದಿ ಸರ್ಪ ಆಗೋದಾದರೆ ಆಗಲಿ, ಆದರೆ ಸರ್ಪ ಯಾವತ್ತಿದ್ದರೂ ಡೇಂಜರ್‌ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಬದಾಮಿಯಲ್ಲಿ ಮಾತನಾಡಿದ ಅವರು, ಮೋದಿ ಬರೀ ಸಂತೆ ಭಾಷಣ ಮಾಡುತ್ತಾರೆ. ಅವರು ಹೇಳುವುದು ಯಾವುದೂ ಜಾರಿಯಾಗೋದಿಲ್ಲ. ಬರೀ ಅವರದ್ದು ಬುರುಡೆ ಭಾಷಣ ಎಂದು ಜರಿದಿದ್ದಾರೆ.

ಕೇಂದ್ರದ ನಾಯಕರು ರಾಜ್ಯದಲ್ಲಿ ಠಿಕಾಣಿ ಹೂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿಯವರು, ಅವರು ಮೇ 9ನೇ ತಾರೀಖಿನವರೆಗೂ ಇರುತ್ತಾರೆ. ಆ ಮೇಲೆ ರಾಜ್ಯದಲ್ಲಿ ಏನಾಗಿದೆ ಅಂತಾನೂ ನೋಡೋದಿಲ್ಲ. ಚುನಾವಣೆ ಮುಗಿದ ಮೇಲೆ ಅವರೆಲ್ಲಾ ಕರ್ನಾಟಕಕ್ಕೆ ಟಾಟಾ ಹೇಳುತ್ತಾರೆ ಎಂದು ಹೇಳಿದ್ದಾರೆ.

ಈಗ ಹೋದರೆ ಅವರೆಲ್ಲಾ ಬರೋದು ಲೋಕಸಭಾ ಚುನಾವಣೆ ಸಮಯದಲ್ಲಿ ಮಾತ್ರ. ಸರ್ಪ, ವಿಷಕನ್ಯೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಆದ್ರೆ ಇವತ್ತಿನ ರಾಜಕಾರಣಕ್ಕೆ ಅದರ ಅವಶ್ಯಕತೆ ಇಲ್ಲ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು, ಸರ್ಪಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

Share Post