DistrictsHealthPolitics

ಸಚಿವ ವಿ.ಸೋಮಣ್ಣಗೆ ಲೋ ಬಿಪಿ; ತಲೆಸುತ್ತು ಬಂದು ಸಮಸ್ಯೆ

ಚಾಮರಾಜನಗರ; ಚಾಮರಾಜನಗರ ಹಾಗೂ ವರುಣಾ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರುವ ಸಚಿವ ವಿ.ಸೋಮಣ್ಣ ಅವರು ಬಿಡುವಿಲ್ಲದೆ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಒತ್ತಡದಲ್ಲಿ ಅವರಿಗೆ ಲೋ ಬಿಪಿಯಾಗಿದ್ದು, ತಲೆಸುತ್ತು ಬಂದು ಕೆಲಕಾಲ ಸಮಸ್ಯೆ ಎದುರಿಸಿದ ಘಟನೆ ನಡೆದಿದೆ. ಚಾಮರಾಜನಗರ ಕ್ಷೇತ್ರದ ಕೋಡಿಮೊಳೆ ಗ್ರಾಮದಲ್ಲಿ ಪ್ರಚಾರದ ಮೇಲೆ ಈ ಘಟನೆ ನಡೆದಿದೆ.

ತಲೆಸುತ್ತು ಬಂದಿದ್ದರಿಂದಾಗಿ ಸೋಮಣ್ಣ ಅವರು ಕೆಲಕಾಲ ವಿಶ್ರಾಂತಿ ಪಡೆದರು. ವೈದ್ಯರಿಂದ ಚಿಕಿತ್ಸೆ ಪಡೆದು ನಂತರ ಪ್ರಚಾರವನ್ನು ಮುಂದುವರೆಸಿದರು. ಇದೇ ವೇಳೆ ಮಾತನಾಡಿರುವ ಸೋಮಣ್ಣ ಅವರು, ಸ್ವಲ್ಪ ಒತ್ತಡ ಹೆಚ್ಚಾಗಿತ್ತು. ಇದರಿಂದ ಲೋ ಬಿಪಿಯಾಗಿ ತಲೆಸುತ್ತು ಬಂದಿದ್ದರಿಂದ ಕಾರಿನಲ್ಲೇ ಕುಳಿತೆ. ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಕಳೆದ ರಾತ್ರಿ ಮಲಗುವ ವೇಳೆಗೆ ಬೆಳಗಿನಜಾವ ನಾಲ್ಕು ಗಂಟೆ ಆಗಿತ್ತು. ಮತ್ತೆ ಬೆಳಗ್ಗೆ ಬೇಗ ಎದ್ದು ಪ್ರಚಾರಕ್ಕೆ ಬಂದೆವು. ಹೀಗಾಗಿ ಈ ರೀತಿ ಆಗಿದೆ. ಈ ಆರೋಗ್ಯವಾಗಿದ್ದೇನೆ ಎಂದು ಸೋಮಣ್ಣ ಹೇಳಿದ್ದಾರೆ.

Share Post