BengaluruCinema

ದೇವರಕೆರೆ ಹಾಳು ಮಾಡಿದ್ದಕ್ಕೆ ಬಿಬಿಎಂಪಿ ವಿರುದ್ಧ ನಟ ಕಿಶೋರ್‌ ಆಕ್ರೋಶ

ಬೆಂಗಳೂರು; ಬಿಬಿಎಂಪಿ ವ್ಯಾಪ್ತಿಯ ದೇವರಕೆರೆ ಹಾಳು ಮಾಡಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಟ ಕಿಶೋರ್‌ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಕಿಶೋರ್‌ ಅವರು ವಿಡಿಯೋವೊಂದನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬೆಂಗಳೂರು ದಕ್ಷಿಣದಲ್ಲಿರುವ ದೇವರಕೆರೆಗೆ ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಹೊಯ್ಸಳರ ಕಾಲದಲ್ಲಿ ಕಟ್ಟಲಾದ ಈ ಕೆರೆ ಮೊದಲು ಅರಣ್ಯ ಇಲಾಖೆ ಅದೀನದಲ್ಲಿತ್ತು. ಈ ವೇಳೆ ಕೆರೆಯಲ್ಲಿನ ನೀರು ಶುದ್ಧವಾಗಿತ್ತು. ಆದ್ರೆ ಹತ್ತು ವರ್ಷಗಳ ಹಿಂದೆ ಈ ಕೆರೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿದ್ದು, ಅಂದಿನಿಂದ ಕೆರೆಯ ನೀರು ಕುಲುಷಿತಗೊಳ್ಳುತ್ತಾ ಬಂದಿದೆ ಎಂದು ಕಿಶೋರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಕೆರೆ ಉಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Share Post