DistrictsPolitics

Modi Speech; ಕಾಂಗ್ರೆಸ್‌ ಶಾಂತಿಯ ದುಷ್ಮನ್‌, ಅಭಿವೃದ್ಧಿಯ ದುಷ್ಮನ್; ನರೇಂದ್ರ ಮೋದಿ

ಮಂಗಳೂರು; ಕಾಂಗ್ರೆಸ್‌ ಶಾಂತಿಯ ದುಷ್ಮನ್‌, ಅಭಿವೃದ್ಧಿಯ ದುಷ್ಮನ್ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ನಿವೃತ್ತ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ನಮ್ಮ ನಾಯಕರೊಬ್ಬರು ನಿವೃತ್ತಿಯಾಗುತ್ತಿದ್ದಾರೆ ಅಂತಿದ್ದಾರೆ. ಕರ್ನಾಟಕವನ್ನು ಕಾಂಗ್ರೆಸ್‌ ಹೈಕಮಾಂಡ್‌ ಎಟಿಎಂ ಮಾಡಿಕೊಂಡಿದೆ. ಕಾಂಗ್ರೆಸ್‌ ೮೦ ಪರ್ಸೆಂಟ್‌ ಕಮೀಷನ್‌ ಹೊಡೆಯುವ ಪಕ್ಷ ಎಂದು ಮೋದಿ ಕಾಂಗ್ರೆಸ್‌ ವಿರುದ್ಧ ಪ್ರಹಾರ ನಡೆಸಿದರು. ಕಾಂಗ್ರೆಸ್‌, ಜೆಡಿಎಸ್‌ ಬಗ್ಗೆ ಜನರಿಗೆ ಎಚ್ಚರಿಕೆ ಇರಬೇಕು. ಕಾಂಗ್ರೆಸ್‌ ಪರಿವಾರ ರಾಜಕಾರಣ ಮಾಡುತ್ತಿದೆ. ಅತಂತ್ರ ಸರ್ಕಾರ ಬಂದರೆ ಜನರ ಬದುಕು ಕೂಡಾ ಅತಂತ್ರವಾಗಲಿದೆ ಎಂದು ಮೋದಿ ಹೇಳಿದರು. ಈ ಬಾರಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಕರ್ನಾಟಕವನ್ನು ನಂಬರ್‌ ಮಾಡುತ್ತೇವೆ ಎಂದು ಮೋದಿ ಹೇಳಿದರು.

ಔದ್ಯೋಗಿಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೊದಲ ಸ್ಥಾನಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡಲಿದೆ. ಹೀಗಾಗಿ ನೀವು ಈ ಬಾರಿ ಬಿಜೆಪಿಯನ್ನು ಗೆಲ್ಲಿಸಬೇಕು. ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರ್ನಾಟಕ ಸರ್ವನಾಶ ಆಗುತ್ತದೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಇದೆ ಅಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕಾಂಗ್ರೆಸ್‌ನವರು ಬರೀ ಸುಳ್ಳು ಅಶ್ವಾಸನೆಗಳನ್ನು ನೀಡುತ್ತಾರೆ ಎಂದು ಮೋದಿ ಆರೋಪಿಸಿದರು.

Share Post