CrimeDistricts

ಪತ್ನಿ ಸಾವಿನ ಹಿನ್ನೆಲೆಯಲ್ಲಿ ಸಮಾಧಿ ಬಳಿಯೇ ಪತಿ ನೇಣಿಗೆ ಶರಣು!

ಚಿಕ್ಕಬಳ್ಳಾಪುರ; ಒಂದು ವರ್ಷದಿಂದ ಪತ್ನಿ ಸಾವಿನ ನೋವಿನಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಪತ್ನಿಯ ಸಮಾಧಿ ಬಳಿಯೇ ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ತೀಮಾಕಲಪಲ್ಲಿ ಸ್ಮಶಾನದ ಬಳಿ ಈ ಘಟನೆ ನಡೆದಿದೆ. 38 ವರ್ಷದ ಗುರುಮೂರ್ತಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. 

ಗುರುಮೂರ್ತಿ ಬಾಗೇಪಲ್ಲಿ ಪಟ್ಟಣದ 16ನೇ ವಾರ್ಡ್‌ನಲ್ಲಿ ವಾಸವಿದ್ದರು. ಅವರ ಪತ್ನಿ ಮೌನಿಕಾ ಕಳೆದ ವರ್ಷ ಡಿಸೆಂಬರ್‌ 20ರಂದು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರು ಚಾಲಕನಾಗಿ ಕೆಲಸ ಮಾಡುವ ಗುರುಮೂರ್ತಿ ಪತ್ನಿ ಸಾವನ್ನಪ್ಪಿದಂದಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು.

ಇಂದು ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತೇನೆಂದು ಹೇಳಿ, ಪತ್ನಿಯ ಸಮಾಧಿ ಬಳಿಗೆ ಹೋಗಿದ್ದಾನೆ. ಪತ್ನಿಯ ಸಮಾಧಿಗೆ ಪೂಜೆ ಮಾಡಿದ್ದಾನೆ. ಅನಂತರ ಅಲ್ಲೇ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಗೇಪಲ್ಲಿ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

 

Share Post