Districts

ಮಂಡ್ಯದಲ್ಲಿ ಧಾರಾಕಾರ ಮಳೆ; ಕೊಚ್ಚಿಹೋದ ಹೆದ್ದಾರಿ – ಟ್ರಾಫಿಕ್‌ ಜಾಮ್‌

ಮಂಡ್ಯ; ಮೈಸೂರು- ಬೆಂಗಳೂರು ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಇದೇ ವೇಳೆಯಲ್ಲಿ ಭಾರಿ ಮಳೆಯಾಗದಿದರಿಂದ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿದು, ರಸ್ತೆಯೇ ಕೊಚ್ಚಿಹೋಗಿದೆ. ಇದರಿಂದಾಗಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌ ಆಗಿದೆ.

ಮಂಡ್ಯದ ಇಂಡುವಾಳು ಬಳಿ ಹೆದ್ದಾರಿ ಕೊಚ್ಚಿ ಹೋಗಿದೆ. ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಬಂದ ಕಾರಣ ಸೇತುವೆಯ ಪೈಪ್‍ಗಳು ಕೊಚ್ಚಿ ಬಂದಿವೆ. ಈ ಪರಿಣಾಮ ಬೆಂಗಳೂರಿನಿಂದ ಮೈಸೂರಿನ ಕಡೆಗೆ ತೆರಳುವ ವಾಹನ ಸವಾರು ಟ್ರಾಫಿಕ್ ಜಾಮ್‍ನಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಮಳೆ ಇನ್ನೂ ಹೆಚ್ಚಾದ್ರೆ ಹೆದ್ದಾರಿ ಇನ್ನಷ್ಟು ಕುಸಿಯುವ ಆತಂಕ ಇದೆ.

Share Post