CrimeDistricts

ಧರ್ಮಕ್ಕಾಗಿಯೇ ನನ್ನ ಗಂಡ ಕೊಲೆ ಆಗಿದೆ; ವೇಣುಗೋಪಾಲ್‌ ಪತ್ನಿ ಪೂರ್ಣಿಮಾ

ಮೈಸೂರು; ನನ್ನ ಗಂಡ ಮೂರು ವರ್ಷದಿಂದ ಹನುಜಯಂತಿಯ ಮುಂದಾಳತ್ವ ವಹಿಸುತ್ತಿದ್ದರು. ಅದನ್ನು ಸಹಿಸದೆ ನಮ್ಮ ಗಂಡನನ್ನು ಕೊಲೆ ಮಾಡಲಾಗಿದೆ ಎಂದು ಟಿ.ನರಸೀಪುರದಲ್ಲಿ ಇತ್ತೀಚೆಗೆ ಕೊಲೆಯಾದ ಯುವ ಬ್ರಿಗೇಡ್‌ನ ವೇಣುಗೋಪಾಲ್‌ ಪತ್ನಿ ಪೂರ್ಣಿಮಾ ಆರೋಪ ಮಾಡಿದ್ದಾರೆ. ನನ್ನ ಗಂಡನ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆದಿಲ್ಲ. ಧರ್ಮಕ್ಕಾಗಿಯೇ ಈ ಕೊಲೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಟಿ.ನರಸೀಪುರದಲ್ಲಿ ಜುಲೈ 8ರಂದು ನಡೆದ ಹನುಮ ಜಯಂತಿ ವೇಳೆ ಪುನೀತ್‌ ರಾಜ್‌ಕುಮಾರ್‌ ಫೋಟೋ ಇಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಅನಂತರ ಅಂದು ರಾತ್ರಿ ಜಗಳ ಮಾಡಿದವರು ವೇಣುಗೋಪಾಲ್‌ನರನ್ನು ಕರೆಸಿಕೊಂಡು ಕೊಲೆ ಮಾಡಿದ್ದರು. ಪುನೀತ್‌ ಫೋಟೋ ತೆಗೆದ ಕಾರಣಕ್ಕಾಗಿಯೇ ನನ್ನ ಗಂಡನ ಕೊಲೆಯಾಗಿದೆ ಎಂದು ಅಂದು ವೇಣುಗೋಪಾಲ್‌ ಪತ್ನಿ ಪೂರ್ಣಿಮಾ ಹೇಳಿದ್ದರು. ಆದ್ರೆ ಇದೀಗ ಅವರು ಧರ್ಮದ ಕಾರಣಕ್ಕೆ ನನ್ನ ಗಂಡನ ಕೊಲೆಯಾಗಿದೆ ಎಂದು ಹೇಳಿದ್ದಾರೆ.

ನನ್ನ ಗಂಡನ ಬಳಿ ಹಣ ಇರಲಿಲ್ಲ, ಅಧಿಕಾರ ಇರಲಿಲ್ಲ. ಆದರೂ ಅವರು ಅದ್ದೂರಿಯಾಗಿ ಹನುಮ ಜಯಂತಿ ಮಾಡುತ್ತಿದ್ದರು. ಇದನ್ನು ಸಹಿಸದೆ ಕೊಲೆ ಮಾಡಲಾಗಿದೆ ಎಂದು ಪೂರ್ಣಿಮಾ ಹೇಳಿದ್ದಾರೆ.

Share Post