DistrictsPolitics

ಮೋದಿ ಸತ್ತರೆ ಬೇರೆ ಯಾರೂ ಪ್ರಧಾನಿಯಾಗಲ್ವಾ..?; ವಿವಾದವೆಬ್ಬಿಸಿದ ಕಾಂಗ್ರೆಸ್‌ ಶಾಸಕನ ಹೇಳಿಕೆ!

ಬೆಳಗಾವಿ; ಎಲ್ಲರೂ ಬರೀ ನರೇಂದ್ರ ಮೋದಿ ಎಂದು ಹೇಳುತ್ತಿದ್ದಾರೆ.. ನರೇಂದ್ರ ಮೋದಿ ಸಾವನ್ನಪ್ಪಿದರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಪ್ರಶ್ನೆ ಮಾಡಿದ್ದಾರೆ… ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, ಈ ರೀತಿಯ ವಿವಾದಿತ ಹೇಳಿಕೆ ನೀಡಿದ್ದಾರೆ.. ಅವರ ಈ ಹೇಳಿಕೆ ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದೆ..

ಇದನ್ನೂ ಓದಿ; ಅಶ್ಲೀಲ ವಿಡಿಯೋ ಪ್ರಕರಣ; ಇಂದು ರೇವಣ್ಣ ಮನೆಯಲ್ಲಿ ಸ್ಥಳ ಮಹಜರು!

ಕಾಗವಾಡ ತಾಲ್ಲೂಕಿನ ಮಮದಾಪೂರ ಗ್ರಾಮದಲ್ಲಿ ಶಾಸಕ ರಾಜು ಕಾಗೆಯವರು ಪ್ರಚಾರ ನಡೆಸಿದರು.. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಸಾವನ್ನಪ್ಪಿದರೆ ಬೇರೆ ಪ್ರಧಾನಿ ಅಭ್ಯರ್ಥಿ ಇಲ್ಲವೇ..? 140 ಕೋಟಿ ಜನಸಂಖ್ಯೆ ಬೇರೆ ಪ್ರಧಾನಿ ಸಿಗೋದಿಲ್ಲವೇ ಎಂದು ಪ್ರಶ್ನೆ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ..

ಇದನ್ನೂ ಓದಿ; ನಡು ರಸ್ತೆಯಲ್ಲೇ ಯುವತಿಯರ ಬಡಿದಾಟ; ವಿಡಿಯೋಗಳಿವೆ!

ಯುವಕರೆಲ್ಲಾ ಮೋದಿ ಮೋದಿ ಎಂದು ಹೇಳುತ್ತಿದ್ದಾರೆ.. ಆದ್ರೆ ಯಾವುದೇ ಸಮಸ್ಯೆಯಾದರೂ ಇಲ್ಲಿ ಮೋದಿ ಬರೋದಿಲ್ಲ.. ನಾವೇ ನಿಮ್ಮ ಸಮಸ್ಯೆ ಬಗೆಹರಿಸಬೇಕು.. ಆದ್ರೆ ಎಲ್ರೂ ಮೋದಿ ಮೋದಿ ಅಂತಾರೆ.. ಮೋದಿಯವರನ್ನು ತೆಗೆದುಕೊಂಡು ಏನು ನೆಕ್ಕುತ್ತೀರಾ ಎಂದೂ ಶಾಸಕ ರಾಜು ಕಾಗೆ ಪ್ರಶ್ನೆ ಮಾಡಿದ್ದಾರೆ..

Share Post