Districts

ಪಿರಿಯಾಪಟ್ಟಣದಲ್ಲಿ ಮ್ಯಾನ್‌ ಹೋಲ್‌ಗಿಳಿದ ಪೌರಕಾರ್ಮಿಕ ಸಾವು

ಮೈಸೂರು : ಮೈಸೂರು ಜಿಲ್ಲೆಯ ಪಿರಿಯಪಟ್ಟಣದಲ್ಲಿ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಪೌರಕಾರ್ಮಿಕರೊಬ್ಬರು ಉಸಿರುಗಟ್ಟಿ ಸಾವನಪ್ಪಿದ್ದಾರೆ. ಇನ್ನ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಮೃತಪಟ್ಟ ವ್ಯಕ್ತಿಯ ಹೆಸರು ಮಧು (27) ಎಂದು ತಿಳಿದು ಬಂದಿದೆ.

ನಾಗರತ್ನ ಅವರ ಮನೆಯ ಒಳಚರಂಡಿ ಕಟ್ಟಿಕೊಂಡಿತ್ತು. ಇದನ್ನು ಸರಿಪಡಿಸಲು ಅವರು ಮೂರು ಪೌರಕಾರ್ಮಿಕರಿಗೆ ತಿಳಿಸಿದ್ದರು. ಸ್ವಚ್ಛಗೊಳಿಸುವ ಸಂದರ್ಭ ಅಸ್ವಸ್ಥಗೊಂಡ ಕಾರಣ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಮಧು ಮೃತ ಪಟ್ಟಿದ್ದಾರೆ. ನಾಗರತ್ನ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಮಧು ಅವರ ಶವವನ್ನು ಜಿಲ್ಲಾಧಿಕಾರಿಯ ಮುಂದೆ ಇಟ್ಟುಕೊಂಡು ಪೌರಕಾರ್ಮಿಕರು  ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್‌ ಮನವಿ ಸ್ವೀಕರಿಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Share Post