CrimeDistricts

ಮಗಳನ್ನು ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಭೀಕರ ಅಪಘಾತ; ಇಬ್ಬರ ದುರ್ಮರಣ!

ಚಿತ್ರದುರ್ಗ; ಮಗಳನ್ನು ತುಮಕೂರಿನಲ್ಲಿ ಶಾಲೆಗೆ ಬಿಟ್ಟು ಬರಲು ಹೋಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಳವಿಬಾಗಿ ಬಳಿ ಈ ದುರ್ಘಟನೆ ನಡೆದಿದೆ..

ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ನಡೆದಿದೆ ಎಂದು ತಿಳಿದುಬಂದಿದೆ.. ವಿಶಾಲಾಕ್ಷಮ್ಮ (75) ಹಾಗೂ ನಾಗರಾಜ್ ಶೆಟ್ಟಿ (55) ಮೃತಪಟ್ಟಿದ್ದಾರೆ.. ನಾಜರಾಜ್‌ ಅವರು ತಮ್ಮ ಮಗಳನ್ನು ತುಮಕೂರಿನ ಶಾಲೆಗೆ ಸೇರಿಸಿದ್ದರು.. ಹೀಗಾಗಿ ಶಾಲೆಗೆ ಬಿಟ್ಟು ಬರಲು ಹಿರಿಯೂರಿನಿಂದ ತೆರಳುತ್ತಿದ್ದರು.. ಈ ವೇಳೆ ಈ ದುರಂತ ನಡೆದಿದೆ..

ಘಟನೆಯಲ್ಲಿ ಮೃತ ನಾಗರಾಜ್‌ ಅವರ ಮಗಳು ಬಿಂದು, ಪತ್ನಿ ಭಾಗ್ಯಲಕ್ಷ್ಮಿ, ಸಂಬಂಧಿ ಗೀತಾಗೆ ಗಂಭೀರ ಗಾಯಗಳಾಗಿವೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಐಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ..

 

Share Post