DistrictsPolitics

ಆರೋಗ್ಯ ಸಮಸ್ಯೆ ಇದ್ದರೂ ಜನರಿಗಾಗಿ ಯಾತ್ರೆ ಮಾಡ್ತಿದ್ದೇನೆ; ಹೆಚ್ಡಿಕೆ

ಮಂಡ್ಯ; ಪಂಚರತ್ನ ಯಾತ್ರೆಯಿಂದಾಗಿ ನನಗೆ ಸರಿಯಾಗಿ ನಿದ್ದೆಯಾಗಿಲ್ಲ. ಆರೋಗ್ಯ ಸಮಸ್ಯೆ ಇದ್ದರೂ ಜನರಿಗಾಗಿ ಯಾತ್ರೆ ಮಾಡುತ್ತಿದ್ದೇನೆ. ಆದ್ರೆ, ನನ್ನ ಅನಾರೋಗ್ಯ ನನ್ನ ಮೇಲೆ ದೊಡ್ಡ ಪರಿಣಾಮವೇನೂ ಬೀರಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಾಗಮಂಗಲದಲ್ಲಿ ಮಾತನಾಡಿದ ಅವರು, ಪಂಚರತ್ನ ಯಾತ್ರೆಯನ್ನು ಯಶಸ್ವಿಗೊಳಿಸುತ್ತಿರುವುದಕ್ಕೆ ಮಂಡ್ಯ ಜಿಲ್ಲೆಯ ಜನತೆಗೆ ಧನ್ಯವಾದ ತಿಳಿಸಿದರು.

ನಾಗಮಂಗಲದ ಬಿಜಿಎಸ್ ಆಸ್ಪತ್ರೆಗೆ ತೆರಳಿದ್ದ ಹೆಚ್ಡಿಕೆ ಅವರನ್ನು, ಜೆಡಿಎಸ್ ಕಾರ್ಯಕರ್ತರು ಯೋಗಕ್ಷೇಮ ವಿಚಾರಿಸಿದರು. ಮಂಡ್ಯ ಜಿಲ್ಲೆಯಲ್ಲಿ 7 ದಿನಗಳ ಪ್ರವಾಸ ಅದ್ಭುತ ರೀತಿಯಲ್ಲಿ ನಡೆದಿದೆ. ಮಧ್ಯರಾತ್ರಿಯಾದರೂ ಜನರು ಒಟ್ಟಾಗಿ ಸೇರಿ ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದಾರೆ ಎಂದು ಹೆಚ್ಡಿಕೆ ಇದೇ ವೇಳೆ ಹೇಳಿದ್ದಾರೆ.

 

Share Post