Districts

ಕಿತ್ತಳೆ ಮಾರುತಿದ್ದ ರಸ್ತೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ಹೆಸರು

ಮಂಗಳೂರು: ಕಿತ್ತಲೆ ಮಾರಿ ಅದರಲ್ಲಿ ಶಾಲೆ ನಡೆಸುತ್ತಿರುವ ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಗೌರವ ಸೂಚಿಸುವ ಸಲುವಾಗಿ ಅವರು ಕಿತ್ತಲೆ ಮಾರುತ್ತಿದ್ದ ರಸ್ತೆಗೆ ಅವರ ಹೆಸರಿಡಲು ಮಂಗಳೂರುನ ಪಾಲಿಕೆ ಮುಂದಾಗಿದೆ. ಪದ್ಮಶ್ರೀ ಹಾಜಬ್ಬ ಅವರು ಕಿತ್ತಳೆ ಹಣ್ಣು ಮಾರುತ್ತಿದ್ದ ರಸ್ತೆಗೆ ‘ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ’ ಎಂದು ನಾಮಕರಣ ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ. ಇತ್ತೀಚೆಗಷ್ಟೇ ಹರೇಕಳ ಹಾಜಬ್ಬ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಪಾಲಿಕೆ ರಸ್ತೆಗೆ ಹಾಜಬ್ಬ ಹೆಸರಿಡುವ ಮೂಲಕ ಅವರಿಗೆ ಗೌರವ ಸಲ್ಲಿಸಲು ಮುಂದಾಗಿದೆ.

Share Post