CrimeDistricts

ಧಾರವಾಡದಲ್ಲಿ ಉದ್ಯಮಿಯ ಕಾರು ಅಡ್ಡಗಟ್ಟಿ 5 ಲಕ್ಷ ರೂ. ದರೋಡೆ!

ಧಾರವಾಡ; ಧಾರವಾಡದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಯೊಂದು ನಡೆದಿದೆ.. ಉದ್ಯಮಿಯೊಬ್ಬರ ಗಮನ ಬೇರೆಡೆ ಸೆಳೆಯುವಂತೆ ಮಾಡಿ, 5 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ.. ಧಾರವಾಡದ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. 

ಉದ್ಯಮಿ ಅಬೀದ್ ನಾಲತವಾಡ ಅವರು ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಕಾರಿನಲ್ಲಿ ಹೊರಟಿದ್ದರು.. ಈ ವೇಳೆ ಅವರನ್ನು ಸಿಬಿಟಿ ಬಳಿ ಇರುವ ಬ್ಯಾಂಕ್ ನಿಂದ ಹಿಂಬಾಲಿಸಿದ ದರೋಡೆಕೋರರು, ಕಾರ್‌ನ ಗ್ಲಾಸ್‌ ಒಡೆದಿದ್ದಾರೆ.. ಈ ವೇಳೆ ಉದ್ಯಮಿ ಕಾರು ನಿಲ್ಲಿಸಿದಾ ಅವರ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ.. ಪೊಲೀಸರು ದರೋಡೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

 

Share Post