DistrictsPolitics

ಎಲ್ಲಾ ಲೆಕ್ಕಾಚಾರ ಮಾಡಿಯೇ ಭರವಸೆ; ಡಿ.ಕೆ.ಶಿವಕುಮಾರ್‌

ಮೈಸೂರು; ಎಲ್ಲಾ ಲೆಕ್ಕಾಚಾರ ಮಾಡಿಯೇ ಜನರಿಗೆ ಉಚಿತ ಭರವಸೆ ಕೊಟ್ಟಿದ್ದೇವೆ‌. ಮೋದಿ ಎಷ್ಟೇ ಬಾರಿ ರಾಜ್ಯಕ್ಕೆ ಬಂದರೂ, ಏನು ಪ್ರಯೋಜನವಾಗುವುದಿಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ತಾವು ಮಾಡಿದ ಚುನಾವಣೆ ಭರವಸೆಗಳ ಬಗ್ಗೆ ಬಿಜೆಪಿ ಹಗುರವಾಗಿ ಮಾತನಾಡುತ್ತಿದೆ. ನಾವು ಎಲ್ಲಾ ಲೆಕ್ಕಾಚಾರ ಮಾಡಿಯೇ ಜನರಿಗೆ ಭರವಸೆ ಕೊಟ್ಟಿದ್ದೇವೆ‌. ನಾವು ಲಂಚ ಕೊಟ್ಟು ಮತ ಕೇಳುತ್ತಿಲ್ಲ. ಬದ್ಧತೆಯ ಭರವಸೆ ನೀಡಿ ಮತ ಕೇಳುತ್ತಿದ್ದೇವೆ ಎಂದು ಹೇಳಿದರು.

ನಾನು ಇಂಧನ ಸಚಿವನಾಗಿದ್ದವನು. ನನಗೆ ಗೊತ್ತಿದೆ ಜನರಿಗೆ ಹೇಗೆ ಉಚಿತ ವಿದ್ಯುತ್ ಕೊಡಬೇಕೆಂಬುದು. ಸಿದ್ದರಾಮಯ್ಯನವರು ವಿತ್ತ ಸಚಿವರಾಗಿದ್ದವರು. ಅವರಿಗೂ ಗೊತ್ತಿದೆ ಹೇಗೆ ಹಣಕಾಸು ವ್ಯವಸ್ಥೆ ಮಾಡಬೇಕು ಎಂಬುದು. ಈ ಬಿಜೆಪಿ ಸರ್ಕಾರ 40% ನಿಲ್ಲಿಸಿದರೆ ಅದೇ ದುಡ್ಡಲ್ಲಿ ಜನರ ಕಲ್ಯಾಣ ಮಾಡಬಹುದು ಎಂಧು ಡಿ.ಕೆ.ಶಿವಕುಮಾರ್‌ ಹೇಳಿದರು.

ದೇಶದಲ್ಲೇ ಈ ಭ್ರಷ್ಟ ಸರ್ಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. ಹೋಟೆಲ್ ತಿಂಡಿ ಬೋರ್ಡ್ ರೀತಿ ಇವರು ಎಲ್ಲದಕ್ಕೂ ಬೋರ್ಡ್ ಹಾಕುತಿದ್ದಾರೆ. ಇಂತಹ ಸರ್ಕಾರವನ್ನ ಯಾವತ್ತೂ ನೋಡಿರಲಿಲ್ಲ.ರಾಜ್ಯ ನಾಯಕರ ಹೆಸರು ಹೇಳಿದರೆ ಮೋದಿಯನ್ನ ಪದೇ ಪದೇ ಕರೆಸುತ್ತಿದ್ದಾರೆ. ರಾಜ್ಯದ ಜನರ ಕಷ್ಟ ಕೇಳಲು ಮೋದಿ ಯಾವತ್ತು ಕರ್ನಾಟಕಕ್ಕೆ ಬರಲಿಲ್ಲ. ಈಗ ಪದೇ ಪದೇ ಬರುತ್ತಿದ್ದಾರೆ. ಮೋದಿ ಎಷ್ಟೇ ಬಾರಿ ಬಂದ್ರೂ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಡಿಕೆಶಿ ಹೇಳಿದರು.

Share Post