CrimeDistricts

ಆಂಧ್ರದಿಂದ ಬಂತು ಭಾರಿ ಪ್ರಮಾಣದ ಗಾಂಜಾ; ಮಂಗಳೂರಿನಲ್ಲಿ ವಶ

ಮಂಗಳೂರು; ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಭಾರೀ ಪ್ರಮಾಣದಲ್ಲಿ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಮಹೀಂದ್ರ ಎಕ್ಸ್‌ಯುವಿ ಕಾರಿನಲ್ಲಿ ಆಂಧ್ರದಿಂದ ಮಂಗಳೂರಿಗೆ ಗಾಂಜಾ ರವಾನೆ ಮಾಡಲಾಗುತ್ತಿತ್ತು. ಈ ಮಾಹಿತಿ ಅರಿತ ಸಿಸಿಬಿ ಪೊಲೀಸರು ದಾಳಿ ನಡೆಸಿ, 132 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಬರೋಬ್ಬರಿ 40 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

ಮುಡಿಪು ಕುರ್ನಾಡು ಗ್ರಾಮದ ಕಾಯರ್ ಗೋಳಿ ಎಂಬಲ್ಲಿ ಈ ದಾಳಿ ನಡೆಸಲಾಗಿದೆ. ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರ ತುಂಬಾ ಗಾಂಜಾ ಇದ್ದದ್ದು ಪತ್ತೆಯಾಗಿದೆ. ನರಿಂಗಾನ ರಮೀಜ್ ರಾಜ್ (30) ಹಾಗೂ ಕೇರಳದ ಅಬ್ದುಲ್ ಖಾದರ್ ಹ್ಯಾರಿಸ್ (31) ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಕಾರು, ಎರಡು ಮೊಬೈಲ್‌, ಮೂರು ತಲ್ವಾರ್‌ಗಳು, 2000 ರೂಪಾಯಿ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.

Share Post