DistrictsPolitics

ಯಡಿಯೂರಪ್ಪಗೆ ತಿರುಗೇಟು ನೀಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ

ಬೆಳಗಾವಿ; ಬೆನ್ನಿಗೆ ಚೂರಿ ಹಾಕಿ ಲಕ್ಷ್ಮಣ ಸವದಿಯವರು ಬಿಜೆಪಿ ಬಿಟ್ಟು ಹೋಗಿದ್ದಾರೆ. ಅವರನ್ನು ಸೋಲಿಸಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ನನ್ನ ಬಗ್ಗೆ ಮಾತನಾಡೋದಕ್ಕೆ ಯಡಿಯೂರಪ್ಪ ಅವರಿಗೆ ನೈತಿಕ ಹಕ್ಕಿಲ್ಲ ಎಂದು ಹೇಳಿದ್ದಾರೆ.

ನನ್ನ ಹಾಗೆ ಯಡಿಯೂರಪ್ಪ ಅವರಿಗೂ ಕೂಡಾ ಬಿಜೆಪಿ ಪಕ್ಷ ಹಲವು ಹುದ್ದೆಗಳನ್ನು ನೀಡಿತ್ತು. ಸಿಎಂ, ವಿಪಕ್ಷ ನಾಯಕನ ಸ್ಥಾನಗಳನ್ನು ನೀಡಿತ್ತು. ಹೀಗಿದ್ದರೂ ಅವರು ಕೆಜೆಪಿ ಪಕ್ಷ ಸ್ಥಾಪನೆ ಮಾಡಿದರು. ಹೀಗಿದ್ಮೇಲೆ ಅವರಿಗೆ ನನ್ನ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಸವದಿ ಹೇಳಿದರು.

ಸೋಲಿಸುವುದು ಗೆಲ್ಲಿಸುವುದು ಯಾವುದೇ ನಾಯಕನ ಕೈಯಲ್ಲಿರೋದಿಲ್ಲ. ಜನರ ಕೈಯಲ್ಲಿರುತ್ತದೆ. ನಮ್ಮ ಕ್ಷೇತ್ರದಲ್ಲಿ ಹಲವಾರು ಜನ ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಿದ್ದಾರೆ. ನನ್ನ ಕೈ ಬಲಪಡಿಸುತ್ತಿದ್ದಾರೆ ಎಂದು ಸವದಿ ಇದೇ ವೇಳೆ ಹೇಳಿದ್ದಾರೆ. ಇನ್ನು ಮಾಜಿ ಸಚಿವ ರಮೇಶ್‌ ಜಾರಕಿಹೊಳಿಯವರು ಕೂಡಾ ಗಂಡಸಾಗಿದ್ರೆ ಲಕ್ಷ್ಮಣ ಸವದಿ ಡಿಸಿಎಂ ಸ್ಥಾನ ಬೇಡ ಎನ್ನಬೇಕಿತ್ತು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ ಸವದಿ ಚುನಾವಣೆ ನಂತರ ನಾನು ಹಾಗೂ ನನ್ನ ಕ್ಷೇತ್ರದ ಮತದಾರರು ಇದಕ್ಕೆ ಉತ್ತರ ಕೊಡುತ್ತಾರೆ ಎಂದಿದ್ದಾರೆ.

Share Post