DistrictsPolitics

ಸ್ವರೂಪ್‌ ಮಗ ಇದ್ದಂತೆ ಎಂದ ಭವಾನಿಗೆ ಪ್ರೀತಂ ಗೌಡ ತಿರುಗೇಟು

ಹಾಸನ; ಹಾಸನ ಜೆಡಿಎಸ್‌ ಅಭ್ಯರ್ಥಿ ಸ್ವರೂಪ್‌ ನನ್ನ ಮಗನಿದ್ದಂತೆ ಎಂದು ಭವಾನಿ ರೇವಣ್ಣ ಹೇಳಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಲೇವಡಿ ಮಾಡಿದ್ದಾರೆ. ಈ ಮೊದಲು ಅಭ್ಯರ್ಥಿ ಹೆಸರೇ ಗೊತ್ತಿಲ್ಲ ಎಂಬ ರೀತಿಯಲ್ಲಿ ಹೇಳುತ್ತಿದ್ದರು. ಈ ನೋಡಿದರೆ ಮಗ ಎಂದು ಹೇಳುತ್ತಿದ್ದಾರೆ ಎಂದು ಪ್ರೀತಂ ಗೌಡ ಲೇವಡಿ ಮಾಡಿದ್ದಾರೆ.

ಸ್ವರೂಪ್‌ ಮೇಲೆ ಭವಾನಿ ರೇವಣ್ಣ ಪ್ರೀತಿ ತೋರಿಸುತ್ತಿದ್ದಾರೆ. ಇದಕ್ಕೆ ಕಾರಣ ೨೦೨೪ಕ್ಕೆ ಅವರ ಮಗ ಎಂಪಿ ಕ್ಯಾಂಡಿಡೇಟ್‌. ಆಗ ಬೆಂಬಲ ಬೇಕಾಗುತ್ತದೆ. ಹೀಗಾಗಿ ಭವಾನಿ ಹಾಗೂ ಸ್ವರೂಪ್‌ ನಡುವೆ ಹೊಂದಾಣಿಕೆಯಾಗಿದೆ. ಭವಾನಿಯವರು ಸ್ವರೂಪ್‌ ಗೆಲ್ಲಲಿ ಎಂದು ಪ್ರಚಾರ ಮಾಡುತ್ತಿಲ್ಲ. ತಮ್ಮ ಮಗನಿಗಾಗಿ ಪ್ರಚಾರ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ಕಾಲದಲ್ಲಾದರೆ ಜನರಿಗೆ ಅರ್ಥವಾಗುತ್ತಿರಲಿಲ್ಲ. ಈಗ ಎಲ್ಲವೂ ಜನಕ್ಕೆ ಅರ್ಥವಾಗುತ್ತದೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ನಾನು ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದರೆ, ಜನ ನನಗೆ ಆಶೀರ್ವಾದ ಮಾಡುತ್ತಾರೆ. ಯಾರು ಹತಾಶರಾಗಿದ್ದಾರೆ ಅನ್ನೋದು ಜನ ನೋಡುತ್ತಿದ್ದಾರೆ. ಜನ ಯಾರಿಗೆ ಮಣೆ ಹಾಕುತ್ತಾರೆ ನೋಡೋಣ ಎಂದು ಪ್ರೀತಂ ಗೌಡ ಇದೇ ವೇಳೆ ಹೇಳಿದ್ದಾರೆ.

Share Post