CrimeDistricts

ಲಾಡ್ಜ್‌ನಲ್ಲಿ ಬೆಡ್‌ಗೆ ಬೆಂಕಿ; ಮಲಗಿದ್ದಲ್ಲೇ ಪ್ರಾಣಬಿಟ್ಟ ವ್ಯಕ್ತಿ!

ಮಂಗಳೂರು; ಲಾಡ್ಜ್‌ನಲ್ಲಿ ಮಲಗಿದ್ದಾಗ ಅಚಾನಕ್ಕಾಗಿ ಬೆಡ್‌ಗೆ ಬೆಂಕಿ ಬಿದ್ದು, ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ ನಲ್ಲಿ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯನ್ನು ಬೆಂದೂರ್ ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಎಂದು ಗುರುತಿಸಲಾಗಿದೆ.

ಯಶ್‌ರಾಜ್‌ ಸುವರ್ಣ ಅವರು ನವೆಂಬರ್‌ 15ರಿಂದ ಅದೇ ಹೋಟೆಲ್‌ನಲ್ಲಿ ತಂಗಿದ್ದರು. ಕಳೆದ ರಾತ್ರಿ ಊಟ ಮುಗಿಸಿ ಅವರು ತನ್ನ ಕೊಠಡಿಗೆ ವಾಪಸ್‌ ಆಗಿದ್ದರು. ಆದ್ರೆ ಮಧ್ಯರಾತ್ರಿ ವೇಳೆ ಕೊಠಡಿಯಿಂದ ಹೊಗೆ ಬರುತ್ತಿತ್ತು. ಹೀಗಾಗಿ ಲಾಡ್ಜ್‌ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಬೆಂಕಿ ನಂದಿಸಿದ್ದಾರೆ. ನಂತರ ಪರೀಕ್ಷೆ ಮಾಡಿದಾಗ ಯಶ್‌ರಾಜ್‌ ಸುವರ್ಣ ಸಾವನ್ನಪ್ಪಿರುವುದು ಕಂಡುಬಂದಿದೆ.

ಬೆಡ್‌ಗೆ ಬೆಂಕಿ ಬಿದ್ದಿದ್ದರಿಂದ ಈ ಸಾವು ಆಗಿದೆ. ಆದ್ರೆ ಬೆಡ್‌ಗೆ ಹೇಗೆ ಬೆಂಕಿ ಬಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಆಕಸ್ಮಿಕವಾಗಿ ನಡೆದಿದ್ದಾ ಅಥವಾ ಆತ್ಮಹತ್ಯೆಯಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ.

Share Post