BengaluruCrime

ಹೊತ್ತಿ ಉರಿದ ಹಣ್ಣಿನ ಗೋದಾಮು: ತಪ್ಪಿದ ದುರಂತ

ಬೆಂಗಳೂರು:  ಹಣ್ಣು ಸಂಗ್ರಹಿಸಿಟ್ಟಿದ್ದ ಗೋದಾಮು ಧಗ ಧಗ ಹೊತ್ತಿ ಉರಿದ ಘಟನೆ ನಗರದ  ಅಕ್ಕಿಪೇಟೆಯಲ್ಲಿ ನಡೆದಿದೆ.  ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ. ಮೂರನೇ ಅಂತಸ್ಥಿನ ಕಟ್ಟಡದ ನೆಲಮಹಡಿಯಲ್ಲಿ ಇದ್ದ ಹಣ್ಣಿನ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಆವರಿಸಿ ನೋಡ ನೋಡ್ತಿದ್ದಂತೆ ಬೆಂಕಿ ಜ್ವಾಲೆ ಹರಡಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಅದೃಷ್ಟವಶಾತ್‌ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಯಾಕಂದ್ರೆ ಅಗ್ನಿ ಅವಘಡ ಸಂಭವಿಸಿದ ಸಮೀಪದಲ್ಲೇ ಪಟಾಕಿ ಅಂಗಡಿ ಇತ್ತು. ಬೆಂಕಿ ಕೆನ್ನಾಲಿಗೆ ಸ್ವಲ್ಪ ಪಟಾಕಿ ಅಂಗಡಿಗೆ ತಗುಲಿದ್ದರೆ ದೊಡ್ಡ ಅನಾಹುತ ನಡೆಯುತ್ತಿದ್ದರಲ್ಲಿ ಅನುಮಾನವೇ ಇಲ್ಲ. ಘಟನೆ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post