CrimeDistricts

ಕಡಬ ಬಳಿ ಆನೆ ದಾಳಿ; ಯುವತಿ ಸೇರಿ ಇಬ್ಬರ ದುರ್ಮರಣ

ಮಂಗಳೂರು; ಇಂದು ಮುಂಜಾನೆ ಕಾಡಾನೆ ದಾಳಿ ಮಾಡಿದ್ದು, ಒಬ್ಬ ಯುವತಿ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ನಡೆದಿದೆ. ರೆಂಜಿಲಾಡಿ ಗ್ರಾಮದವರೇ ಆದ 21 ವರ್ಷದ ರಂಜಿತಾ ಹಾಗೂ 55 ವರ್ಷದ ರಮೇಶ್‌ ರೈ ನೈಲ ಆನೆ ದಾಳಿಗೆ ಸಾವನ್ನಪ್ಪಿದ ದುರ್ದೈವಿಗಳು ಎಂದು ತಿಳಿದುಬಂದಿದೆ.

ರಂಜಿತಾ ಅವರು ಪೇರಡ್ಕ ಹಾಲು ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದು, ಮುಂಜಾನೆ ಸೊಸೈಟಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನೈಲ ಬಳಿ ಕಾಡಾನೆ ದಾಳಿ ಮಾಡಿದೆ. ಈ ವೇಳೆ ರಂಜಿತಾ ಕಿರುಚಿಕೊಂಡಿದ್ದು, ರಮೇಶ್‌ ಅವರು ರಕ್ಷಣೆಗೆ ಬಂದಿದ್ದಾರೆ. ಈ ಆನೆ ರಮೇಶ್‌ ಮೇಲೂ ದಾಳಿ ಮಾಡಿದೆ. ರಮೇಶ್‌ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ರಂಜಿತಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

Share Post