Districts

ಮೇಕೆದಾಟು ಯೋಜನೆ – ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಡಿಕೆಶಿ

ಕೊಡಗು : ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಕಾರ್ಯಗತಕ್ಕೆ ತರಲು ಆಗ್ರಹಿಸುತ್ತಿರುವ ಕೆಪಿಸಿಸಿ ಮುಖಂಡರು ಇಂದು ಕಾವೇರಿಯ ಉಗಮ ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದಾರೆ.  ಜನವರಿ ೯ರಿಂದ ಅಣೆಕಟ್ಟು ಯೋಜನೆಯ ಪ್ರದೇಶದಿಂದ ಬೆಂಗಳೂರಿನವರೆಗೆ ಕೆಪಿಸಿಸಿ ಮುಖಂಡರು ಪಾದಯಾತ್ರೆ ಆಯೋಜಿಸಿದ್ದಾರೆ. ಅದರ ಯಶಸ್ಸಿಗೆ ಕೋರಿ ಇಂದು ಪೂಜೆ ನೆರವೇರಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕ್ಷೇತ್ರಕ್ಕೆ ಭೇಟಿ ನೀಡಿದರೋ ಪವಿತ್ರ ಕುಂಡಿಕೆ ಬಳಿ ಪೂಜೆ ಸಲ್ಲಿಸಲಿಲ್ಲ. ಡಿಕೆ ಶಿವಕುಮಾರ್‌ ಅವರಿಗೆ ಸೂತಕ ಇರುವ ಕಾರಣ ಪೂಜೆ ಸಲ್ಲಿಸಿಲ್ಲ. ಬದಲಿಗೆ ಕೆಪಿಸಿಸಿ ಕಾರ್ಯಧ್ಯಕ್ಷ ಆರ್.‌ ಧೃವನಾರಾಯಣ್‌ ಮತ್ತು ಕೆಪಿಸಿಸಿ ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಕಾವೇರಿಗೆ ಪೂಜೆ ಸಲ್ಲಿಸಿದ್ದಾರೆ.

ಎಐಸಿಸಿ ವಕ್ತಾರ ಬ್ರಿಜೇಶ್‌ ಕಾಳಪ್ಪ, ಮಾಜಿ ಸಚಿವ ಎಚ್‌ ಎಂ ರೇವಣ್ಣ, ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ಯುವ ಘಟಕದ ಅಧ್ಯಕ್ಷ ಮಿಥುನ್‌ ಗೌಡ ಮುಂತಾದವರು ಹಾಜರಿದ್ದರು.

Share Post