DistrictsPolitics

ಬಿಜೆಪಿ ಕಾರ್ಯಕರ್ತರಿಂದಲೇ ಸಚಿವ ಆರ್‌.ಅಶೋಕ್‌ ವಿರುದ್ಧ ಅಭಿಯಾನ

ಮಂಡ್ಯ; ಮಂಡ್ಯದಲ್ಲಿ ಸಚಿವ ಆರ್‌.ಅಶೋಕ್‌ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್‌ ಅಭಿಯಾನ ಶುರು ಮಾಡಿದ್ದಾರೆ. ಸಚಿವ ಆರ್‌.ಅಶೋಕ್‌ ಗೋ ಬ್ಯಾಕ್‌ ಎಂಬ ಪೋಸ್ಟರ್‌ಗಳನ್ನು ಮಂಡ್ಯದಾದ್ಯಂತ ಅಂಟಿಸಲಾಗಿದೆ.

ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಈ ಬಾರಿ ನಾಲ್ಕೈದು ಸ್ಥಾನ ಗೆಲ್ಲಬೇಕು ಎಂದು ಬಿಜೆಪಿ ಹೈಕಮಾಂಡ್‌ ರಾಜ್ಯ ನಾಯಕರಿಗೆ ಟಾರ್ಗೆಟ್‌ ನೀಡಿದೆ. ಹೀಗಾಗಿ ಸಚಿವ ಗೋಪಾಲಯ್ಯಗೆ ಕೊಕ್‌ ನೀಡಿ ಆರ್‌ ಅಶೋಕ್‌ ಹೆಗಲಿಗೆ ಮಂಡ್ಯ ಬಿಜೆಪಿ ಉಸ್ತುವಾರಿ ನೀಡಲಾಗಿದೆ. ಈ ನಿರ್ಧಾರಕ್ಕೆ ಬಿಜೆಪಿಯಲ್ಲೇ ಅಸಮಾಧಾನ ಭುಗಿಲೆದ್ದಿದೆ. ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಅಶೋಕ್‌ ವಿರುದ್ಧ ಗೋ ಬ್ಯಾಕ್‌ ಅಭಿಯಾನ ಶುರು ಮಾಡಿದ್ದಾರೆ.

Share Post