Districts

ಬಿಜೆಪಿ ಸೇರಲು 30 ಕೋಟಿ ರೂ. ಆಫರ್‌ ಬಂದಿತ್ತು; ಧ್ರವನಾರಾಯಣ್‌

ಮೈಸೂರು; ಬಿಜೆಪಿ ಸೇರಲು ನನಗೆ 30 ಕೋಟಿ ರೂಪಾಯಿ ಹಾಗೂ ಪ್ರಮುಖ ಮಂತ್ರಿ ಸ್ಥಾನ ಆಫರ್‌ ಬಂದಿತ್ತು ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಹೇಳಿದ್ದಾರೆ. ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯಿಂದ ಆಫರ್‌ ಬಂದಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಎಲ್ಲ ವರ್ಗದ ಮುಖಂಡರ ಜೊತೆ ಗುರುತಿಸಿಕೊಂಡಿರುವ ನಾನು ವೀರಶೈವ ಲಿಂಗಾಯತ ಸಮಾಜದವನು ಎಂದು ಅನೇಕರಿಗೆ ತಿಳಿದಿರಲಿಲ್ಲ. ಆಪರೇಷನ್‌ ಕಮಲದ ಸಂದರ್ಭದಲ್ಲಿ ನನಗೂ ಆಫರ್‌ ಬಂದಿತ್ತು. ಬಿಜೆಪಿ ಸೇರುವಂತೆ ಇತರ ಜಾತಿಯ ನಾಯಕರಿಗೆ 15 ಕೋಟಿಯಿಂದ 20 ಕೋಟಿ ಮತ್ತು ಮಂತ್ರಿಗಿರಿ ಆಮಿಷ ಒಡ್ಡಲಾಯಿತು. ಆದರೆ, ನಾನು ಲಿಂಗಾಯತ ಎಂದು ಗೊತ್ತಾಗಿದ್ದರಿಂದ 30 ಕೋಟಿ ಮತ್ತು ಪ್ರಮುಖ ಸಚಿವ ಸ್ಥಾನದ ಆಫರ್ ಬಂದಿತ್ತು. ಆದ್ರೆ ನಾನು ಅದಕ್ಕೆ ಬಗ್ಗದೆ ಕಾಂಗ್ರೆಸ್‍ನಲ್ಲೇ ಉಳಿದೆ ಎಂದು ಧ್ರುವನಾರಾಯಣ್‌ ಹೇಳಿದರು.

Share Post