Districts

ಹಿಜಾಬ್‌ ವಿವಾದ: ಬಾಂದ್ರಾ ಶಾಸಕನಿಂದ ಮುಸ್ಕಾನ್‌ಗೆ ಭರ್ಜರಿ ಗಿಫ್ಟ್

ಮಂಡ್ಯ: ನಗರದ ಪಿಇಎಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಸ್ಕಾನ್‌ ವಿದ್ಯಾರ್ಥಿನಿಗೆ ಬಾಂದ್ರಾ ಶಾಸಕ ಜಿಶಾನ್‌ ಸಿದ್ಧಿಕ್‌ ಭರ್ಜರಿ ಗಿಫ್ಟ್‌ ಕೊಟ್ಟಿದ್ದಾರೆ. ಮಂಡ್ಯದ ಗುತ್ತಲು ಬಡಾವನೆಯಲ್ಲಿರುವ ವಿದ್ಯಾರ್ಥಿನಿ ನಿವಾಸಕ್ಕೆ ಭೇಟಿ ನೀಡಿ ಐ-ಫೋನ್‌, ಸ್ಮಾರ್ಟ್‌ ವಾಚ್‌ ಅನ್ನು ಗಿಫ್ಟ್‌ ನೀಡಿದ್ದಾರೆ. ಬಳಿಕ ಮಾತನಾಡಿ ಮುಸ್ಕಾನ್‌ ಅಲ್ಲಾಹು ಅಕ್ಬರ್‌ ಎಂದು ಘೋಷನೆ ಕೂಗಿರುವುದು ನನಗೆ ಹೆಮ್ಮೆ ಅನಿಸಿದೆ. ಮಂಡ್ಯದಿಂದ ಇಂಡಿಯಾ ಪೂರ್ತಿ ಈಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಿವಾಗುತ್ತಿದೆ. ಹಿಜಾಬ್‌ ಧರಿಸುವುದ ನಮ್ಮ ಹಕ್ಕು..ಅದನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

ಮೊನ್ನೆ ಹಿಜಾಬ್‌ ವಿರುದ್ಧ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಕಾಲೇಜಿನ ಬಳಿ ಧರಣಿ ನಡೆಸಿದಾಗ. ಒಂಟಿಯಾಗಿ ವಿದ್ಯಾರ್ಥಿ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದಳು. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿ ವಿದ್ಯಾರ್ಥಿನಿಗೆ ಸಾಕಷ್ಟು ಮೆಚ್ಚುಗೆ ಹರಿದುಬರುತ್ತಿದೆ. ಈಗಾಗಲೇ ವಿದ್ಯಾರ್ಥಿನಿಗೆ ೫ಲಕ್ಷ ಬಹುಮಾನ, ಪ್ರತಿಷ್ಠಿತ ಶಾಲೆಯೊಂದಕ್ಕೆ ಈಕೆಯ ಹೆಸರಿಡಲು ತೀರ್ಮಾನ ಮಾಡಲಾಗಿದೆ.

Share Post