DistrictsPolitics

ರಾಜ್ಯದಲ್ಲಿರೋದು ಬಿ ರಿಪೋರ್ಟ್ ಸರ್ಕಾರ; ಡಿಕೆಶಿ

ಹೊಸಪೇಟೆ; ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. 40 ಪರ್ಸೆಂಟ್‌ ಕಮಿಷನ್‌ ಪಡೆಯಲಾಗುತ್ತಿದ್ದು, ಕೇಸ್ ಗಳಿಗೆ ಬಿ ರಿಪೋರ್ಟ್‌ ಹಾಕಲಾಗುತ್ತಿದೆ. ರಾಜ್ಯದಲ್ಲಿರೋದು ಬಿ ರಿಪೋರ್ಟ್ ಸರ್ಕಾರ ಎಂದು ಡಿ.ಕೆ.ಶಿವಕುಮಾರ್ ದೂಷಿಸಿದರು.

ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲ ಕೇಸ್ ಗಳಿಗೆ ಸರ್ಕಾರ ಬಿ ರಿಪೋರ್ಟ್ ಹಾಕಿದ್ದು, ನಾವು ಅಧಿಕಾರಕ್ಕೆ ಬಂದರೆ ಅವುಗಳ ಮರು ತನಿಖೆ ಮಾಡುತ್ತೇವೆ ಎಂದರು.

ಪಿಎಸ್‌ಐ ನೇಮಕಾತಿಯಲ್ಲಿ ಹಗರಣ ನಡೆದಿದ್ದು, ದಲ್ಲಾಳಿಗಳಾಗಿ ಮಂತ್ರಿಗಳು ಹಾಗೂ ಶಾಸಕರು‌ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ತನಿಖೆ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

ಡಿ.ಕೆ.ಶಿವಕುಮಾರ್‌ ಅವರು ಇಂಧನ ಸಚಿವರಾಗಿದ್ದಾಗ ಏನು ಮಾಡಿದ್ದರು ಎಂದು ಅಶೋಕ್ ಕೇಳುತ್ತಿದ್ದಾರೆ. ನಾನು ಮಿನಿಸ್ಟರ್ ಇದ್ದಾಗ ಏನು ಮಾಡಿದೆ ಎಂಬುದನ್ನು ಪ್ರಧಾನಿ ಮೋದಿಯನ್ನು ಕೇಳಿ, ಅವರೇ ಕರೆದು ಪ್ರಶಸ್ತಿ ಕೊಟ್ಟಿದ್ದಾರೆ ಎಂದರು.

Share Post