Districts

ರಾಣೆಬೆನ್ನೂರು ಬಳಿ ಭೀಕರ ಅಪಘಾತ; ಇಬ್ಬರ ದುರ್ಮರಣ

ಹಾವೇರಿ: ರಾಣೆಬೆನ್ನೂರು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿ ಮಾಗೋಡ ಕ್ರಾಸ್‌ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಸಾವ್ನ್ನಪ್ಪಿದ್ದಾರೆ. ಮತ್ತಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತಪಟ್ಟ ಇಬ್ಬರೂ ಯುವಕರಾಗಿದ್ದಾರೆ. ಇಪ್ಪತ್ತೇಳು ವರ್ಷದ ಬಸವರಾಜ ತೆಗ್ಗಿಮನಿ ಹಾಗೂ ಇಪ್ಪತ್ತೊಂದು ವರ್ದ ಶಂಕರಪ್ಪ ಮೃತಪಟ್ಟವರು. ಇಬ್ಬರೂ ನರಗುಂದ ತಾಲ್ಲೂಕಿನ ಬೈರನಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.

ಸೋಮನಾಥ್‌ ಹಾಗೂ ಸಂಜೀವ್‌ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Share Post