Districts

ಯುವ ರೈತರಿಗೆ ಸಿಗದ ಹೆಣ್ಣು; ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

ಮಂಡ್ಯ; ಆದಿಚುಂಚನಗಿರಿ ಮಠದಲ್ಲಿ ವಧುವರರ ಸಮಾವೇಶ ನಡೆದಾಗ ಹೆಣ್ಣು ಹುಡುಕುತ್ತಿದ್ದ ಸಾವಿರಾರು ರೈತ ಕುಟುಂಬದ ಯುವಕರು ಸೇರಿದ್ದನ್ನು ಈ ಹಿಂದೆ ನೋಡಿದ್ದೆವು. ಕೃಷಿ ಕೆಲಸ ಮಾಡುವ ಹುಡುಗರಿಗೆ ಹುಡುಗಿ ಸಿಗದೇ ಇರುವುದೇ ಇದಕ್ಕೆ ಕಾರಣ. ಹೀಗಾಗಿ ವಿವಾಹಿತ ಯುವಕರು ಈಗ ದೇವರ ಮೊರೆ ಹೋಗಿದ್ದಾರೆ.

ಒಂದಷ್ಟು ಬ್ರಹ್ಮಚಾರಿಗಳು ಹಾಗೂ ಅವಿವಾಹಿತರು ಇಂದು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ‘ಬ್ರಹ್ಮಚಾರಿಗಳ ನಡಿಗೆ ಮಲೆಮಾದಪ್ಪನೆಡೆಗೆ’ ಘೋಷ ವಾಕ್ಯದೊಂದಿಗೆ ಮದ್ದೂರು ತಾಲ್ಲೂಕಿನ ಭಾರತೀನಗರದಿಂದ ಮಲೆಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಶುರು ಮಾಡಿದ್ದಾರೆ.

ರೈತರು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ 100ಕ್ಕೂ ಹೆಚ್ಚು ಯುವಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅವರೆಲ್ಲಾ ಮಹದೇಶ್ವರ ದರ್ಶನ ಪಡೆದು ಹೆಣ್ಣು ಸಿಗುವಂತೆ ಮಾಡುವಂತೆ ಪ್ರಾರ್ಥಿಸಲಿದ್ದಾರೆ.

Share Post