CrimeDistricts

ವಕೀಲನನ್ನು ಅಟ್ಟಾಡಿಸಿಕೊಂಡು ಹೋಗಿ ಭೀಕರ ಕೊಲೆ!

ಕಲಬುರಗಿ; ಕೋರ್ಟ್‌ಗೆ ಹೊರಟಿದ್ದ ವಕೀಲನನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಲ್ಲಿನ ಸಾಯಿ ಮಂದಿರ ಸಮೀಪವಿರುವ ಅಪಾರ್ಟ್‌ಮೆಂಟ್‌ ಬಳಿ ಈರಣ್ಣಗೌಡ ಪಾಟೀಲ್ (40)  ಎಂಬ ವಕೀಲನನ್ನು ಅಟ್ಟಸಿಕೊಂಡು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಹಾಡಹಗಲೇ ಈ ಕೃತ್ಯ ಎಸಗಲಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. 

ಹತ್ಯೆ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಮೀನು ವಿವಾದ ವಿಚಾರವಾಗಿ ಸಂಬಂಧಿಕರೇ ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಗುಲ್ಬರ್ಗ ವಿವಿ ಠಾಣೆ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ.

 

Share Post