CrimeNational

ಜಿ-20 ಶೃಂಗಸಭೆ ಮೇಲೆ ಖಲಿಸ್ತಾನಿಗಳ ಕಣ್ಣು; ಆಡಿಯೋ ಸಂದೇಶ ಬಿಡುಗಡೆ

ನವದೆಹಲಿ; ದೆಹಲಿಯಲ್ಲಿ ಸೆಪ್ಟೆಂಬರ್ 9, 10ರಂದು G20 ಶೃಂಗಸಭೆ ನಡೆಯಲಿದೆ. ಇದಕ್ಕೆ ಖಲಿಸ್ತಾನಿಗಳ ಭೀತಿ ಎದುರಾಗಿದೆ. ಸಿಖ್ ಫಾರ್ ಜಸ್ಟೀಸ್ ಸಂಸ್ಥಾಪಕ ಗುರಿಪತ್ವಂತ್ ಸಿಂಗ್ ಪನ್ ಎಂಬಾತ ಶೃಂಗಸಭೆಯಲ್ಲಿ ಅಡ್ಡಿಪಡಿಸಿ ಎಂದು ಕಾಶ್ಮೀರಿ ಮುಸ್ಲಿಂ ಯುವಕರಿಗೆ ಕರೆ ನೀಡಿದ್ದಾನೆ. ಈ ಬಗ್ಗೆ ಆಡಿಯೋವೊಂದರನ್ನು ಬಿಡುಗಡೆ ಮಾಡಲಾಗಿದೆ.

G20 ಶೃಂಗಸಭೆಯಲ್ಲಿ ಭಾಗವಹಿಸ;ಉ ವಿಶ್ವದ ಪ್ರಮುಖ ರಾಷ್ಟ್ರಗಳ ದಿಗ್ಗಜರು, ವಿಶೇಷ ಅತಿಥಿಗಳು ದೆಹಲಿಗೆ ಬರುತ್ತಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದೆ. ಈ ಬೆನ್ನಲ್ಲೇ ಖಲಿಸ್ತಾನಿ ನಾಯಕ ಇಂತಹದ್ದೊಂದು ಸಂದೇಶ ರವಾನಿಸಿದ್ದು ಆತಂಕಕ್ಕೆ ಕಾರಣವಾಗಿದೆ.  ಶುಕ್ರವಾರದ ನಮಾಜ್ ಬಳಿಕ ಕಾಶ್ಮೀರದ ಮುಸ್ಲಿಂರು G20 ಶೃಂಗಸಭೆ ನಡೆಯುವ ಪ್ರಗತಿ ಮೈದಾನದತ್ತ ಮೆರವಣಿಗೆ ಹೋಗಬೇಕೆಂದು ಆಡಿಯೋದಲ್ಲಿ ಕರೆ ನೀಡಲಾಗಿದೆ. ಅಲ್ಲದೇ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿಯರ ಬಾವುಟ ಹಾರಿಸುವ ಬೆದರಿಕೆಯನ್ನು ಹಾಕಿದ್ದಾನೆ.

 

Share Post